Advertisement

Stock Investment: ಬಿ.ಸಿ. ರೋಡಿನ ವ್ಯಕ್ತಿಗೆ 18.92 ಲಕ್ಷ ರೂ. ವಂಚನೆ

11:07 PM Feb 02, 2024 | Team Udayavani |

ಬಂಟ್ವಾಳ: ಷೇರು ಮೂಲಕ ಹಣ ಹೂಡಿಕೆ ಮಾಡಿ ಲಾಭ ಪಡೆಯುವಂತೆ ಬಿ.ಸಿ.ರೋಡಿನ ವ್ಯಕ್ತಿಯೋರ್ವರಿಗೆ ಬಂದ ವಾಟ್ಸ್‌ ಆ್ಯಪ್‌ ಸಂದೇಶವನ್ನು ಆಧರಿಸಿ ವಿವಿಧ ಬ್ಯಾಂಕ್‌ ಖಾತೆಗಳಿಗೆ ಹಣ ಜಮೆ ಮಾಡಿ ಅವರು ಒಟ್ಟು 18.92 ಲಕ್ಷ ರೂ. ಕಳೆದುಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

Advertisement

ಬಿ.ಸಿ.ರೋಡು ನಿವಾಸಿ ಸುಬ್ರಾಯ ರಾಮ ಮಡಿವಾಳ ಹಣ ಕಳೆದುಕೊಂಡವರು. ಅವರ ಮೊಬೈಲ್‌ಗೆ 2023ರ ನವೆಂಬರ್‌ನಲ್ಲಿ ಷೇರು ಟ್ರೇಡಿಂಗ್‌ಗಾಗಿ ಹೂಡಿಕೆ ಮಾಡಿ ಲಾಭ ಪಡೆಯುವಂತೆ ವಾಟ್ಸ್‌ಆ್ಯಪ್‌ ಸಂದೇಶ ಬಂದಿತ್ತು. ಅದರ ಆಧಾರದಲ್ಲಿ ಅವರು ಅಪರಿಚಿತ ಆರೋಪಿಗಳು ನೀಡಿದ ಸೂಚನೆಯಂತೆ ಜ. 9ರ ವರೆಗೆ ಹಂತ ಹಂತವಾಗಿ ವಿವಿಧ ಬ್ಯಾಂಕ್‌ ಖಾತೆಗಳಿಗೆ ಒಟ್ಟು 18,92,200 ರೂ.ಗಳನ್ನು ಪಾವತಿಸಿದ್ದರು.

ಆದರೆ ಆರೋಪಿಗಳು ಅವರಿಗೆ ಯಾವುದೇ ಲಾಭಾಂಶ ಹಾಗೂ ಪಾವತಿಸಿದ ಹಣವನ್ನೂ ನೀಡದೇ ವಂಚಿಸಿದ್ದಾರೆ.

ಸಂತ್ರಸ್ತ ವ್ಯಕ್ತಿ ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next