Advertisement

ಬೆಂಗಳೂರಿನಲ್ಲಿ ಕ್ರಮಗಳು ಮತ್ತಷ್ಟು‌ ಬಿಗಿಯಾಲಿದೆ: ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ

09:08 AM Apr 15, 2020 | keerthan |

ಬೆಂಗಳೂರು: ದೇಶಾದ್ಯಂತ ಮೇ.3ರ ವರೆಗೆ ಎರಡನೇ ಹಂತದ ಲಾಕ್ ಡೌನ್ ಮುಂದುವರಿಸಲಾಗಿದೆ. ಈ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಮತ್ತಷ್ಟು ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಹಾಟ್ ಸ್ಪಾಟ್ ಗಳಲ್ಲಿ ಬಿಗಿ ಲಾಕ್ ಡೌನ್ ಮಾಡಿದ್ದೇವೆ. ಬೆಂಗಳೂರಿನಲ್ಲಿ ಮತ್ತಷ್ಟು‌ ಕ್ರಮ ಬಿಗಿಯಾಲಿದೆ ಎಂದರು.

ಬೆಂಗಳೂರಿನಲ್ಲಿ ಎರಡು ಏರಿಯಾಗಳಲ್ಲಿ ಸೀಲ್ ಡೌನ್ ವಿಚಾರ ಜಿಲ್ಲಾಡಳಿತದ ಜೊತೆ ಏಪ್ರಿಲ್ 20 ರವರೆಗೆ ಚರ್ಚಿಸುತ್ತೇವೆ. ನಂತರ ತೀರ್ಮಾನ ಮಾಡುತ್ತೇವೆ ಎಂದರು.

ವಿಶೇಷವಾಗಿ ಯಾವ ಜಿಲ್ಲೆಗಳಲ್ಲಿ ಸೋಂಕು ಪ್ರಕರಣ ಹೆಚ್ಚಿದೆ ಅಲ್ಲಿ ನಿರ್ಭಂದ ಮಾಡಲಾಗುವುದು. ಬೀದರ್, ಕಲಬುರಗಿ, ಮೈಸೂರು ಗಳಲ್ಲಿ ಪ್ರಕರಣ ಹೆಚ್ಚಿದೆ. ಅಂತಹ ಕಡೆ ಒಬ್ಬೊಬ್ಬ ಎಡಿಜಿಪಿಗಳನ್ನು ಹಾಕುತ್ತೇವೆ. ಅಲ್ಲಿ ಮತ್ತಷ್ಟು ನಿಗಾ ಇಡಲಾಗುವುದು.  ಮತ್ತಷ್ಟು ಓಡಾಟ ನಿರ್ಭಂದ, ಕಡಿವಾಣ ಹಾಕುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next