Advertisement

ಕೇಂದ್ರದಿಂದ ಮಲತಾಯಿ ಧೋರಣೆ: ಅರೆಸೇನಾ ಪಡೆ

12:55 AM Mar 04, 2019 | |

ಹೊಸದಿಲ್ಲಿ: ಕೇಂದ್ರ ಸರಕಾರ ತಮ್ಮ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿರುವ ಅರೆಸೇನಾ ಪಡೆಗಳ ಸಿಬಂದಿ, ರವಿವಾರ ಇಲ್ಲಿನ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದರು. 

Advertisement

ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಮ್ಮ ಶಕ್ತಿ ಏನೆಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ತೋರಿಸುವುದಾಗಿ ಯೋಧರು ಎಚ್ಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಯೋಧರೊಬ್ಬರು,”ಪ್ರಧಾನಿ ಮೋದಿ ಪ್ರತಿ ವರ್ಷ ಅರೆಸೇನಾ ಪಡೆಗಳ ಜತೆಗೆ ದೀಪಾವಳಿ ಆಚರಿಸುತ್ತಾರೆ. ಆದರೆ,  ಯಾವುದೇ ಕೊಡುಗೆ ನೀಡಿಲ್ಲ. 2004ರಿಂದ ನಮ್ಮ ನಿವೃತ್ತ ಯೋಧರಿಗೆ ಪಿಂಚಣೆ ಬರುತ್ತಿಲ್ಲ. ನಮಗೆ ಒನ್‌ ರ್‍ಯಾಂಕ್‌, ಒನ್‌ ಪೆನ್ಶನ್‌  ಕೊಡುಗೆ ಸಿಕ್ಕಿಲ್ಲ. ನಮ್ಮ ಹುತಾತ್ಮ ಯೋಧರಿಗೆ ಈವರೆಗೆ ಯಾವುದೇ ಗೌರವ ಸಿಕ್ಕಿಲ್ಲ’ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next