Advertisement
ಹೆಬ್ಟಾಳ ನಿವಾಸಿ ಇಂದು ಚೌವ್ಹಾಣ್ಸಿಂಗ್ (45) ಬಂಧಿಸಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಆರೋಪಿ ಯನ್ನು ವಶಕ್ಕೆ ಪಡೆಯಲಾಗಿದ್ದು, ಪ್ರಾಥಮಿಕ ವಿಚಾರಣೆಯಲ್ಲಿ ಆಸ್ತಿಗಾಗಿ ಸುಪಾರಿ ಕೊಟ್ಟಿರುವುದು ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದರು.
Related Articles
Advertisement
ಆಸ್ತಿಯನ್ನು ತನಗೆ ಹಾಗೂ ತನ್ನ ಮಕ್ಕಳಿಗೆ ಹಸ್ತಾಂತರಿಸುವಂತೆ ಪತಿಗೆ ಪೀಡಿಸುತ್ತಿದ್ದಳು. ಈ ಮಧ್ಯೆ ಸಿದ್ಧಾರ್ಥ್ ಬಳಿಯೂ ಆಸ್ತಿ ವಿಚಾರವಾಗಿ ಆರೋಪಿ ಜತೆ ಜಗಳ ಮಾಡಿಕೊಂಡಿದ್ದಳು. ಹೀಗಾಗಿ ಸಿದ್ಧಾರ್ಥ್ ಸಿಂಗ್ ಅಮೆರಿಕಾ ದಲ್ಲಿ ವಾಸವಾಗಿದ್ದ. ಇತ್ತೀಚೆಗಷ್ಟೇ ಬೆಂಗಳೂರಿಗೆ ಬಂದು ಅಮೃತಹಳ್ಳಿಯ ಅಪಾರ್ಟ್ ಮೆಂಟ್ನಲ್ಲಿ ಒಬ್ಬನೇ ವಾಸವಾಗಿದ್ದಾನೆ.
ಇದನ್ನೂ ಓದಿ: ಪ್ರೇಯಸಿಯ ಹತ್ಯೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡ ವಿವಾಹಿತ ವ್ಯಕ್ತಿ
ಅದರಿಂದ ಆಕ್ರೋಶಗೊಂಡಿದ್ದ ಇಂದು, ತನ್ನ ಪರಿಚಯಸ್ಥ ವಿನೋದ್ ಜತೆ ಸೇರಿ ಸಿದ್ಧಾರ್ಥ್ ಹತ್ಯೆಗೆ ಸಂಚು ರೂಪಿಸಿದ್ದಳು. ಅದೇ ವೇಳೆ ಕೆಲಸ ಇಲ್ಲದೇ ಸುಮ್ಮನಿದ್ದ ಶ್ಯಾಮ್ ಸುಂದರ್ ರೆಡ್ಡಿಗೂ ಹಣದ ಆಮಿಷವೊಡ್ಡಿ ಹತ್ಯೆಗೆ ಸುಪಾರಿ ಕೊಡಲಾಗಿತ್ತು. ಸುಮಾರು 20-30 ಲಕ್ಷ ರೂ. ಸುಪಾರಿ ಕೊಟ್ಟಿರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣ ಏನು?
ಸಿದ್ಧಾರ್ಥ್ ಸ್ವಂತ ಉದ್ಯಮ ನಡೆಸುತ್ತಿದ್ದು, ಅಮೃತಹಳ್ಳಿಯ ದಾಸರಹಳ್ಳಿ ಯಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ಒಬ್ಬರೆ ವಾಸವಾಗಿದ್ದರು. ಜ.19ರಂದು ಬೆಳಗ್ಗೆ ಐದು ಗಂಟೆ ಸುಮಾರಿಗೆ ತನ್ನ ತಂದೆಗೆ ವಾಟ್ಸ್ ಆ್ಯಪ್ ಮೂಲಕ “ಸ್ನೇಹಿತರನ್ನು ಭೇಟಿಯಾಗಲು ಅಮೆರಿಕಾಕ್ಕೆ ಹೋಗುತ್ತಿರುವುದಾಗಿ’ ತಿಳಿಸಿದ್ದರು. ಆದರೆ, ಅಮೆರಿಕಾಕ್ಕೂ ಹೋಗದೆ, ವಾಪಸ್ ಮನೆಗೂ ಬಂದಿಲ್ಲ. ಅದರಿಂದ ಅನುಮಾನಗೊಂಡು ಆತನಿಗೆ ಕರೆ ಮಾಡಿದಾಗ ಫೋನ್ ಸ್ವಿಚ್ಡ್ ಆಫ್ ಆಗಿತ್ತು. ಹೀಗಾಗಿ ಆತ ನಾಪತ್ತೆಯಾಗಿರುವುದಾಗಿ ದೇವೇಂದರ್ ಅಮೃತ್ಹಳ್ಳಿ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು