Advertisement

25 ದಿನ ನನ್ನ ಜೊತೆ ಇರಿ, 5 ವರ್ಷ ನಿಮ್ಮ ಜತೆ ಇರುತ್ತೇನೆ : JDS ಸುಧಾಕರಲಾಲ್

11:05 PM Apr 15, 2023 | Team Udayavani |

ಕೊರಟಗೆರೆ:-25 ವರ್ಷದಿಂದ ಕೊರಟಗೆರೆ ಮನೆ ಮಗನಾಗಿ ಬಡಜನರ ಸೇವೆ ಮಾಡಿದ್ದೇನೆ.. ನೀವು ಇನ್ನು 25ದಿನ ನನ್ನ ಜೊತೆ ಇರಿ, ನಾನು ಮುಂದಿನ 5 ವರ್ಷ ನಿಮ್ಮ ಮನೆಯ ಮಗನಾಗಿ ಕೆಲಸ ಮಾಡ್ತೀನಿ.. ಮನೆ ಮಗನ ನಾಮಪತ್ರ ಸಲ್ಲಿಕೆಯ ವೇಳೆ ನನಗೇ ಆರ್ಶಿವಾದ ಮಾಡಲು ಹರಿದು ಬಂದ ಜನಸಾಗರವೇ 2023 ರ ಚುನಾವಣೆಯ ನನ್ನ ಗೆಲುವಿಗೆ ಸಾಕ್ಷಿ ಎಂದು ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ತಿಳಿಸಿದರು.

Advertisement

ಕೊರಟಗೆರೆ ಪಟ್ಟಣದ ಕಂದಾಯ ಇಲಾಖೆಯಲ್ಲಿ ಶನಿವಾರ ಚುನಾವಣಾ ಅಧಿಕಾರಿಗೆ ನಾಮಪತ್ರ ಸಲ್ಲಿಸಿದ ನಂತರ ಕೊರಟಗೆರೆ ಜೆಡಿಎಸ್ ಪಕ್ಷದ ವತಿಯಿಂದ ಏರ್ಪಡಿಸಲಾಗಿದ್ದ ಕಾರ್ಯಕರ್ತರ ಬೃಹತ್ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಕೊರಟಗೆರೆ ಕ್ಷೇತ್ರದ ಜನತೆಯ ಹೆಸರಿನಲ್ಲಿ ನಾನು ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ನನ್ನ ಹೋರಾಟಕ್ಕೆ ಶಕ್ತಿಯೇ ನಮ್ಮ ಪ್ರಧಾನಿ ದೇವೇಗೌಡರು, ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಜೆಡಿಎಸ್ ಅಧ್ಯಕ್ಷರಾದ ಇಬ್ರಾಹಿಂ ಸಾಹೇಬ್ರು. ನನ್ನ ಯಾವ ಜನ್ಮದ ಪುಣ್ಯವೊ ಗೊತ್ತಿಲ್ಲ. ನಿಮ್ಮೇಲ್ಲರ ಅಕ್ಕರೆಯ ಪ್ರೀತಿ ಮನೆ ಮಗನಿಗೆ ಸಿಕ್ಕಿದೆ. ನಿಮ್ಮ ಮನೆ ಮಗನ ನಾಮಪತ್ರ ಸಲ್ಲಿಕೆಗೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ನಿಮಗೆ ಎಲ್ಲರಿಗೂ ತುಂಬು ಹೃದಯದ ಧನ್ಯವಾದ ಅರ್ಪಿಸುತ್ತೇನೆ ಎಂದರು.

ರಾಜ್ಯ ಹಿಂದುಳಿದ ವರ್ಗದ ಅಧ್ಯಕ್ಷ ಮಹಾಲಿಂಗಪ್ಪ ಮಾತನಾಡಿ ೨೫ಸಾವಿರ ಕೋಟಿ ಸಾಲ ಮನ್ನಾ ಮಾಡಿದ ಕೀರ್ತಿ ಕುಮಾರಸ್ವಾಮಿಗೆ ಸೇರುತ್ತದೆ. ಈಗ ರೈತಾಪಿ ವರ್ಗ ಮತ್ತು ಬಡ ಜನತೆಯ ಅಭಿವೃದ್ದಿಗೆ ಪಂಚರತ್ನ ಯೋಜನೆ ಜಾರಿ ಮಾಡ್ತಾರೇ. ಕುಮಾರಣ್ಣ ನಮ್ಮ ಪ್ರತಿ ಮನೆಗೂ ಬಂದು ಮನವಿ ಮಾಡಿದ್ದಾರೆ. ಚುನಾವಣೆ ವೇಳೆ ಮಾತ್ರ ಬರುವ ರಾಷ್ಟ್ರೀಯ ನಾಯಕರ ಮಾತು ಯಾರು ನಂಬಬೇಡಿ. ೩೦ವರ್ಷದಿಂದ ನಿಮ್ಮ ಜೊತೆ ಇರುವ ಸುಧಾಕರಲಾಲ್‌ಗೆ ನಿಮ್ಮೇಲ್ಲರ ಆರ್ಶಿವಾದ ಇರಲಿ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ಕಾರ್ಯಧ್ಯಕ್ಷ ನರಸಿಂಹರಾಜು, ಕಾರ್ಯದರ್ಶಿ ಲಕ್ಷ್ಮಣ್, ವಕ್ತಾರ ಲಕ್ಷ್ಮೀಶ್, ಉಪಾಧ್ಯಕ್ಷ ಮಂಜುನಾಥ, ಮುಖಂಡರಾದ ಕಾಮರಾಜು, ಸಿದ್ದಮಲ್ಲಪ್ಪ, ಪುಟ್ಟನರಸಪ್ಪ, ಸತ್ಯನಾರಾಯಣ್, ನಟರಾಜ್, ಕಾಕಿಮಲ್ಲಣ್ಣ, ಲಕ್ಷ್ಮೀನಾರಾಯಣ್, ಸುಮರಾಜು, ಪ್ರಕಾಶ್, ಇರ್ಷಾದ್, ಕಲೀಂವುಲ್ಲಾ, ಸೈಯದ್‌ ಸೈಪುಲ್ಲಾ, ಪಾರುಕ್, ಕೌಶಿಕ್, ರಮೇಶ್, ಅಮರ್, ಸಂತೋಷಗೌಡ, ಪವನ್ ಶ್ರೀರಾಮಯ್ಯ, ರವಿವರ್ಮ ಸೇರಿದಂತೆ ಇತರರು ಇದ್ದರು.

Advertisement

ಮೆರವಣಿಗೆಯಲ್ಲಿ30 ಸಾವಿರ ಕಾರ್ಯಕರ್ತರು

ಕೊರಟಗೆರೆ ಪಟ್ಟಣದ ಸರಕಾರಿ ಬಸ್ ನಿಲ್ದಾಣದಿಂದ 30 ಸಾವಿರಕ್ಕೂ ಅಧಿಕ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಮತ್ತು ಅಭಿಮಾನಿಗಳ ಜೊತೆ ಗೂಡಿ ಕಂದಾಯ ಇಲಾಖೆಯ ಕಚೇರಿ ಆವರಣದವರೆಗೂ ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ಬೃಹತ್ ಮೆರವಣಿಗೆ ನಡೆಸಿದರು. ಸುಡುವ ಬಿಸಿಲಿನಲ್ಲೂ ಸಾವಿರಾರು ಕಾರ್ಯಕರ್ತರು ಕುಣಿಯುತ್ತಾ ತಮ್ಮ ನಾಯಕನ ಪರವಾಗಿ ಜೈಘೋಷ ಹಾಕಿ ಜೆಡಿಎಸ್ ಪಕ್ಷದ ಪರವಾಗಿ ಭರ್ಜರಿ ಪ್ರಚಾರ ನಡೆಸಿದರು.

ಕಟ್ಟೆಗಣಪತಿಗೆ ವಿಶೇಷ ಪೂಜೆ ಸಲ್ಲಿಕೆ

ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮುನ್ನಾ ಕ್ಯಾಮೇನಹಳ್ಳಿಯ ಶ್ರೀಆಂಜನೇಯ ಸ್ವಾಮಿ, ಕೊರಟಗೆರೆ ಪಟ್ಟಣದ ಶ್ರೀಕಟ್ಟೆಗಣಪತಿ ಸ್ವಾಮಿ ಮತ್ತು ಶ್ರೀಶಿರಡಿ ಸಾಯಿಬಾಬಾ ದೇವಾಲಯಕ್ಕೆ ಬೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ನಂತರ ತಮ್ಮ ಜೆಡಿಎಸ್ ಪಕ್ಷದ ಮುಖಂಡರ ಜೊತೆ ಗೂಡಿ ಎ 15ರ ಶನಿವಾರ ಮಧ್ಯಾಹ್ನ ೧೨.೩೦ಕ್ಕೆ ನಾಮಪತ್ರ ಸಲ್ಲಿಸಿದರು.

ನಮ್ಮ ಪೋನ್ ಕರೆಗೆ ನೇರವಾಗಿ ಸಿಗುವ ವ್ಯಕ್ತಿ ಲಾಲ್ ಮಾತ್ರ. ನಾವು ಹೇಳಿದ ಕಡೆಯಲ್ಲಿ ನೇರವಾಗಿ ಬರ್ತಾರೇ ನಮ್ಮ ಕಷ್ಟ ಸುಖದಲ್ಲಿ ಬಾಗಿ ಆಗ್ತಾರೇ. ನಮ್ಮ ಕೊರಟಗೆರೆ ಕ್ಷೇತ್ರದ ಜನರ ಆರೋಗ್ಯ ರಕ್ಷಣೆಗೆ 24 ಗಂಟೆಯು ಕಾವಲು ಕಾಯ್ತಾರೇ. ೨೫ವರ್ಷ ಕೊರಟಗೆರೆ ಕ್ಷೇತ್ರದಲ್ಲಿ ಜನಸೇವೆ ಮಾಡಿ ೩೫ ಸಾವಿರ ಜನರ ಆರೋಗ್ಯ ರಕ್ಷಣೆ ಮಾಡಿದ್ದಾರೆ. ನಾವು 2018 ರಲ್ಲಿ ಕಳೆದು ಕೊಂಡಿದ್ದೇವೆ. ಈಗ2023 ಕ್ಕೆ ಮತ್ತೇ ಮಾಜಿ ಶಾಸಕ ಸುಧಾಕರಲಾಲ್ ಗೆಲುವು ಖಚಿತ- ಗೋವಿಂದಪ್ಪ. ಜೆಡಿಎಸ್ ಕಾರ್ಯಕರ್ತ, ಪುರವಾರ

25 ವರ್ಷದಿಂದ ನನಗೆ ನಿಮ್ಮ ಆರ್ಶಿವಾದ ದೊರೆತಿದೆ. ನಿಮ್ಮ ಋಣವನ್ನು ತೀರಿಸಲು ನನಗೆ ಒಂದು ಅವಕಾಶ ನೀಡಿ. ನಿಮ್ಮ ಅಣ್ಣ, ತಮ್ಮ ಮತ್ತು ಮನೆಯ ಮಗನಾಗಿ ನಾನು ಸದಾ ಇರ್ತೀನಿ. 2023ರ ಚುನಾವಣೆಯ ಹೋರಾಟದ ನನ್ನ ಬಲವಾದ ಶಕ್ತಿಯೇ ನೀವು. ನನಗೇ ತೋರಿದ ಪ್ರೀತಿಗೆ ನಾನು ಎಂದಿಗೂ ಚಿರಋಣಿ. ಕೊರಟಗೆರೆ ವಿಧಾನಸಭಾ ಕ್ಷೇತ್ರ ಮತ್ತೆ ಜೆಡಿಎಸ್ ಭದ್ರಕೋಟೆ ಆಗುವುದು ಖಚಿತ. ಕುಮಾರಸ್ವಾಮಿ ಕನಸಿನ ಪಂಚರತ್ನ ಯೋಜನೆಯು ಕೊರಟಗೆರೆ ಕ್ಷೇತ್ರದ ಅಭಿವೃದ್ದಿಗೆ ಸಹಕಾರಿ ಆಗಲಿದೆ.–ಪಿ.ಆರ್.ಸುಧಾಕರಲಾಲ್

Advertisement

Udayavani is now on Telegram. Click here to join our channel and stay updated with the latest news.

Next