Advertisement

ಮಾಹಿತಿ ಆಯುಕ್ತರ ಪ್ರಮಾಣ ವಚನ

11:17 AM Feb 14, 2018 | |

ಬೆಂಗಳೂರು: ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ನಾಲ್ಕು ಮಂದಿ ನೂತನ ರಾಜ್ಯ ಮಾಹಿತಿ ಆಯುಕ್ತರು ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ ನೂತನ ಮಾಹಿತಿ ಆಯುಕ್ತರಾದ ಎಸ್‌.ಎಲ್‌. ಪಾಟೀಲ್‌, ಎಚ್‌.ಪಿ. ಸುಧಾಮದಾಸ್‌, ಡಾ. ಕೆ.ಇ. ಕುಮಾರಸ್ವಾಮಿ ಹಾಗೂ ಡಾ. ಕೆ. ಲಿಂಗರಾಜು ಅವರಿಗೆ ರಾಜ್ಯಪಾಲ
ವಜುಭಾಯಿ ವಾಲಾ ಪ್ರಮಾಣ ವಚನ ಬೋಧಿಸಿದರು. ಈ ವೇಳೆ ಕಾನೂನು ಸಚಿವ ಟಿ.ಬಿ. ಜಯಚಂದ್ರ, ವಿಧಾನಪರಿಷತ್‌ ಸದಸ್ಯ ಕೆ. ಗೋವಿಂದರಾಜು, ಬಿಬಿಎಂಪಿ ಮೇಯರ್‌ ಆರ್‌. ಸಂಪತ್‌ರಾಜ್‌, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಸೇರಿ ಗಣ್ಯರು, ರಾಜ್ಯ ಮಾಹಿತಿ ಆಯೋಗದ ಅಧಿಕಾರಿಗಳು ಉಪಸ್ಥಿತರಿದ್ದರು. ನಾಲ್ಕು ಮಂದಿ ನೂತನ ಮಾಹಿತಿ ಆಯುಕ್ತರನ್ನು ನೇಮಕ ಮಾಡಿ ರಾಜ್ಯಪಾಲರು 2018 ಜ.11ರಂದು ಅಧಿಸೂಚನೆ ಹೊರಡಿಸಿದ್ದರು. ಇವರ ಅಧಿಕಾರವಧಿ ಐದು ವರ್ಷಗಳ ಕಾಲ ಇರಲಿದೆ

Advertisement
Advertisement

Udayavani is now on Telegram. Click here to join our channel and stay updated with the latest news.

Next