Advertisement

ರಾಜ್ಯ ಮಟ್ಟದ ಕಬಡ್ಡಿ: ಕಡಬ ಸರಸ್ವತಿ ವಿದ್ಯಾಲಯ ಪ್ರಥಮ

09:07 AM Aug 24, 2017 | |

ಕಡಬ: ವಿದ್ಯಾಭಾರತಿ ಅಖೀಲ ಭಾರತ ಶಿಕ್ಷಾ ಸಂಸ್ಥಾನ ಇದರ ಆಶ್ರಯದಲ್ಲಿ ಗುಲ್ಬರ್ಗದ ಸೇಡಂನಲ್ಲಿ  ನಡೆದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ  ಕಡಬದ ಸರಸ್ವತಿ ಪದವಿ ಪೂರ್ವ ಕಾಲೇಜಿನ ತಂಡ ಪ್ರಥಮ ಸ್ಥಾನಗಳಿಸಿ, ಅಂತಾರಾಜ್ಯ ಕಬಡ್ಡಿ ಸ್ಪರ್ಧೆಗೆ ಆಯ್ಕೆಗೊಂಡಿದೆ.

Advertisement

ರಾಜ್ಯ ಮಟ್ಟದ ತರುಣರ ವಿಭಾಗದ ಸ್ಪರ್ಧೆಯಲ್ಲಿ  ಕಡಬ ಸರಸ್ವತಿ ವಿದ್ಯಾಲಯದ ಕಬಡ್ಡಿ ತಂಡದಲ್ಲಿ  ವಿದ್ಯಾರ್ಥಿಗಳಾದ ನಿತೇಶ್‌, ಹರ್ಷಿತ್‌, ಸಂತೋಷ್‌, ಅಕ್ಷತ್‌, ರತನ್‌, ಡಿತೀನ್‌, ಪ್ರತೀಕ್‌, ಯತೀನ್‌, ದುರ್ಗಾಪ್ರಸಾದ್‌, ಕಾರ್ತಿಕ್‌ ಭಾಗವಹಿಸಿದ್ದರು. ಈ ಕಬಡ್ಡಿ ತಂಡಕ್ಕೆ ಶಾಲಾ ದೈಹಿಕ ಶಿಕ್ಷಕ ಲಕ್ಷ್ಮೀಶ ಆರಿಗ, ಶಿಕ್ಷಕ ಶಿವಪ್ರಸಾದ್‌ ಹಾಗೂ ಕೋಚ್‌ ಶೇಖರ ಪೂಜಾರಿ ಬೈಲಂಗಡಿ ತರಬೇತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next