Advertisement

ರಾಜ್ಯ ಮಟ್ಟದ ಪಶು ಮೇಳದಲ್ಲಿ  ಪ್ರಶಸ್ತಿ

01:30 AM Jan 17, 2019 | Team Udayavani |

ಬ್ರಹ್ಮಾವರ: ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಜ. 5, 6, 7ರಂದು ನಡೆದ 2ನೇ ರಾಜ್ಯ ಮಟ್ಟದ ಪಶು ಮೇಳ ಮತ್ತು ಮತ್ಸ್ಯ ಮೇಳದಲ್ಲಿ ಉಡುಪಿಯ ಮೊಹಮ್ಮದ್‌ ಇರ್ಷಾದ್‌ ಅವರ ಹೋರಿ ಪ್ರಥಮ ಸ್ಥಾನ ಗಳಿಸಿದೆ.

Advertisement

ಉಡುಪಿಯನ್ನು ಪ್ರತಿನಿಧಿಸಿ ವಾರಂಬಳ್ಳಿ ಗ್ರಾಮದ ಮೊಹಮ್ಮದ್‌ ಇರ್ಷಾದ್‌ ಅವರ ಓಂಗೋಲ್‌ ತಳಿಯ ಹೋರಿ ಮತ್ತು ಸಾಹಿವಾಲ್‌ ತಳಿಯ ಹಸು ಪ್ರದರ್ಶನದಲ್ಲಿ ಭಾಗವಹಿಸಿದ್ದವು. ಸುಲ್ತಾನ್‌ ಹೆಸರಿನ ಹೋರಿಯು ದೇಸೀ ತಳಿಯ ಹೋರಿಗಳಲ್ಲಿ ಪ್ರಥಮ ಸ್ಥಾನ ಗಳಿಸಿ ಚಾಂಪಿಯನ್‌ ಆಫ್‌ ದಿ ಶೋ ಪ್ರಶಸ್ತಿ ಪಡೆಯಿತು.

ಮೊಹಮ್ಮದ್‌ ಇರ್ಷಾದ್‌ ಅವರನ್ನು ದೇಸೀ ತಳಿಯ ಹೈನುಗಾರಿಕೆಗೆ ಪ್ರಗತಿಪರ ರೈತ ಎಂದು ರಾಜ್ಯ ಮಟ್ಟದ ಮೇಳದಲ್ಲಿ ಸಮ್ಮಾನಿಸಲಾಯಿತು.

ತಂಡವನ್ನು ಜಿಲ್ಲಾ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಿಂದ ಪ್ರಾಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next