Advertisement

Brahmavar; ಕೋಟಿ ರೂ. ಗೋಡಂಬಿ ವಂಚನೆ; ಪ್ರಕರಣ ದಾಖಲು

12:47 AM Apr 07, 2024 | Team Udayavani |

ಬ್ರಹ್ಮಾವರ: ಶ್ರೀ ಕೃಷ್ಣ ಕ್ಯಾಶ್ಯೂ ಫ್ಯಾಕ್ಟರಿಯಿಂದ ಸೂರತ್‌ ಮತ್ತು ಅಹ್ಮದಾಬಾದ್‌ಗೆ ತಲುಪಬೇಕಾಗಿದ್ದ ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ತಲುಪಿಸದೆ ವಂಚಿಸಿದ ಕುರಿತು ಪ್ರಕರಣ ದಾಖಲಾಗಿದೆ.

Advertisement

ಎ. 2ರಂದು ಮೊದನ್‌ ಮೊಸಿನ್‌ ಭೈಖುಭಾಯಿ ಉಸ್ಮಾಭಾಯಿ ಮೊದನ್‌ ಅವರ ಲಾರಿಯಲ್ಲಿ ಚಾಲಕ ರಮ್ಜಾನ್‌ ಸೊಧಾ, ಮಹೇಂದ್ರಪುರಿ ಲಾಲ್‌ಪುರಿ ಗುಶಾಯಿ ಗೋಡಂಬಿ ತುಂಬಿಸಿ ಹೊರಟಿದ್ದರು.

ಎ. 5ರಂದು ತಲುಪಬೇಕಾಗಿದ್ದ ಸ್ಥಳಕ್ಕೆ ತಲುಪದೇ ಇದ್ದು ಫೋನ್‌ ಸ್ವಿಚ್‌ ಆಫ್‌ ಆಗಿದೆ. ಲಾರಿಯಲ್ಲಿ 1,21,76,598 ರೂ. ಮೌಲ್ಯದ 24.69 ಮೆಟ್ರಿಕ್‌ ಟನ್‌ ಗೋಡಂಬಿ ಇದ್ದಿದ್ದು ಈ ಕುರಿತು ಮಾಲಕ ಮೋಹನದಾಸ್‌ ಬ್ರಹ್ಮಾವರ ಠಾಣೆಗೆ ದೂರು ನೀಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next