Advertisement

Brahmavara: ವಿದ್ಯುತ್‌ ಕಂಬ ಮುರಿದು ಬಿದ್ದು ಯುವಕ ಮೃತ್ಯು

08:20 PM Mar 29, 2024 | Team Udayavani |

ಬ್ರಹ್ಮಾವರ: ಕೆಂಜೂರು ಪಾದೆಮಠದ ಬಳಿ ಗುರುವಾರ ವಿದ್ಯುತ್‌ ಕಂಬ ಮುರಿದು ಬಿದ್ದು ಕಾರ್ಮಿಕ ರಾಂಪಕ್‌ ಬೋರೊ (20) ಮೃತಪಟ್ಟಿದ್ದಾರೆ.

Advertisement

ಮರ ಬಿದ್ದು ವಿದ್ಯುತ್‌ ಕಂಬ ತುಂಡಾಗಿ ಕೊಕ್ಕರ್ಣೆ-ಹೆಬ್ರಿ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಈ ಸಂದರ್ಭ ಸಂಚಾರ ಬಂದ್‌ ಮಾಡಿ ಕಂಬ ಅಳವಡಿಕೆ ಕೆಲಸ ನಿರ್ವಹಿಸಲಾಗುತ್ತಿತ್ತು.

ವಾಹನ ದಟ್ಟಣೆ ಜಾಸ್ತಿ ಆದಾಗ ಮರದ ಗೆಲ್ಲನ್ನು ತೆಗೆದು ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದ ಸಮಯದಲ್ಲಿ ಚಲಿಸಿದ ಏಸ್‌ ವಾಹನದ ಚಕ್ರಕ್ಕೆ ತಂತಿ ಸಿಲುಕಿದ ಪರಿಣಾಮ ತಂತಿ ಕಟ್ಟಿದ್ದ ಕಂಬ ಮಧ್ಯಭಾಗ ತುಂಡಾಯಿತು. ಕಂಬದಲ್ಲಿ ಕೆಲಸ ಮಾಡುತ್ತಿದ್ದ ರಾಂಪಕ್‌ ಬೋರೊ ರಸ್ತೆಗೆ ಬಿದ್ದು ಮೃತಪಟ್ಟರು. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next