Advertisement

Brahmavar ತಂತ್ರಾಡಿ: ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

12:47 AM Apr 08, 2024 | Team Udayavani |

ಬ್ರಹ್ಮಾವರ: ಕಾಡೂರು ಗ್ರಾಮ ತಂತ್ರಾಡಿಯ ರಾಘವೇಂದ್ರ(43) ಶನಿವಾರ ರಾತ್ರಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

ರಾಘವೇಂದ್ರ, ಪತ್ನಿ ಹೇಮ ಹಾಗೂ ಇಬ್ಬರು ಮಕ್ಕಳು ಹೇಮ ಅವರ ಸಹೋದರನ ಮನೆಗೆ ಉಪನಯನಕ್ಕೆ ತೆರಳಿದ್ದರು. ಕಾರ್ಯಕ್ರಮ ಮುಗಿಸಿ ಎ.5ರ ಸಂಜೆ ಕೆಲಸದ ನಿಮಿತ್ತ ರಾಘವೇಂದ್ರ ತಂತ್ರಾಡಿಯ ಮನೆಗೆ ಬಂದಿದ್ದರು. ಆ ಬಳಿಕ ಪತ್ನಿಯು ಫೋನ್‌ನಲ್ಲಿ ಸರಿಯಾಗಿ ಮಾತನಾಡಿಲ್ಲ ಎಂದು ನೋವಿನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿಚಿತ ವ್ಯಕ್ತಿಯ ಶವ ಪತ್ತೆ
ಬ್ರಹ್ಮಾವರ: ಸೂರಾಲು ಅರಮನೆ ಹಿಂಭಾಗ ಶನಿವಾರ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಸುಮಾರು 45-50 ವರ್ಷ ಪ್ರಾಯವಾಗಿದ್ದು, ಕ್ರೀಂ ಬಣ್ಣದ ತುಂಬು ತೋಳಿನ ಅಂಗಿ, ಕಾಫಿ ಬಿಳಿ ಗೆರೆಗಳಿರುವ ಚೌಕುಳಿ ಲುಂಗಿ ಧರಿಸಿದ್ದಾರೆ. ವ್ಯಕ್ತಿಯು ಎರಡು ದಿನದ ಹಿಂದೆ ಮದ್ಯಪಾನ ಮಾಡಿ ಮಲಗಿದವರು ಅಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತರ ವಾರಸುದಾರರು ಇದ್ದಲ್ಲಿ ತತ್‌ಕ್ಷಣ ಬ್ರಹ್ಮಾವರ ಪೊಲೀಸ್‌ ಠಾಣೆ ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

ಕಾರು ಬೈಕ್‌ಗೆ ಢಿಕ್ಕಿ: ನಾಲ್ವರಿಗೆ ಗಾಯ
ಬ್ರಹ್ಮಾವರ: ಇಲ್ಲಿನ ಆಕಾಶವಾಣಿ ಬಳಿ ರವಿವಾರ ಬೆಳಗ್ಗೆ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಗಾಯಗೊಂಡರು. ಕುಂದಾಪುರ ಕಡೆ ತೆರಳುತ್ತಿದ್ದ ಕಾರು ಎರಡು ಬೈಕ್‌ಗಳಿಗೆ ಢಿಕ್ಕಿ ಹೊಡೆದು ಡಿವೈಡರ್‌ ಏರಿ ನಿಂತಿತು. ಬೈಕ್‌ಗಳ ಸವಾರರಾದ ಪ್ರಖ್ಯಾತ್‌, ಚಂದ್ರ, ಕಾರು ಚಲಾಯಿಸುತ್ತಿದ್ದ ಲಿಖಿತ್‌ ರಜಾರ್‌ ಹಾಗೂ ಪ್ರಯಾಣಿಕ ಗಾಯಗೊಂಡರು. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next