Advertisement

ಕೃಷಿ ಚಟುವಟಿಕೆಗಳಿಗೆ ಲಾಕ್ ಡೌನ್ ನಿಂದ ರಿಲೀಫ್ ನೀಡಿದ ರಾಜ್ಯ ಸರಕಾರ – ಏನೇನಿರುತ್ತೆ?

08:11 AM Apr 23, 2020 | Hari Prasad |

ಬೆಂಗಳೂರು: ರಾಜ್ಯ ಸರಕಾರ ಇಂದು ಮಧ್ಯರಾತ್ರಿಯಿಂದ ಅನ್ವಯಗೊಳ್ಳುವಂತೆ ಲಾಕ್ ಡೌನ್ ನಿಯಮಗಳನ್ನು ಸಡಿಲಗೊಳಿಸಿದೆ. ಈ ಹೊಸ ಮಾರ್ಗಸೂಚಿ ಪ್ರಕಾರ ಸದ್ಯಕ್ಕಿರುವ ಲಾಕ್ ಡೌನ್ ನಿಂದ ಕೃಷಿ ಚಟುವಟಿಕೆಗಳಿಗೆ ಸಂಪೂರ್ಣ ವಿನಾಯಿತಿ ನೀಡಲಾಗಿದೆ.

Advertisement

ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಹಾಗೂ ಸೂಕ್ತ ಸುರಕ್ಷತಾ ವಿಧಾನಗಳನ್ನು ಅಳವಡಿಸಿಕೊಂಡು ಕೃಷಿ ಸಂಬಂಧಿತ ಕಾರ್ಯಚಟುವಟಿಕೆಗಳನ್ನು ನಡೆಸುವಂತೆ ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ.

– ಕೃಷಿ ಭೂಮಿಯಲ್ಲಿ ಕೃಷಿಕರು ಹಾಗೂ ಕೃಷಿ ಕಾರ್ಮಿಕರ ಕೆಲಸಕ್ಕೆ ಅನುಮತಿ

– ಎಪಿಎಂಸಿಗಳ ಮೂಲಕ ಕಾರ್ಯನಿರ್ವಹಿಸುವ ಮಂಡಿಗಳಿಗೆ ಅವಕಾಶ.

– ಕೃಷಿ ಉಪಕರಣಗಳು ಹಾಗೂ ಬಿಡಿ ಭಾಗಗಳ ಅಂಗಡಿಗಳನ್ನು ತೆರೆಯಲು ಅನುಮತಿ.

Advertisement

– ರಸಗೊಬ್ಬರ, ಕ್ರಿಮಿನಾಶಕ, ಬೀಜ ಉತ್ಪಾದನೆ, ವಿತರಣೆ ಹಾಗೂ ಮಾರಾಟಕ್ಕೆ ಅವಕಾಶ.

– ಕಂಬೈನ್ ಹಾರ್ವೆಸ್ಟರ್ ಮಾದರಿಯಲ್ಲಿ ಕೃಷಿ ತೋಟಗಾರಿಕೆ ಯಂತ್ರಗಳ ಅಂತರ್ ರಾಜ್ಯ ಹಾಗೂ ಅಂತರ್ ಜಿಲ್ಲೆ ಸಾಗಾಟಕ್ಕೆ ಅನುಮತಿ.

– ಹಾಲು ಸಂಗ್ರಹ, ಸಂಸ್ಕರಣೆ, ವಿತರಣೆ ಹಾಗೂ ಮಾರಾಟಕ್ಕೆ ಅವಕಾಶ.

– ಹಾಲು, ಹಾಲಿನ ಉತ್ಪನ್ನಗಳ ಸಂಸ್ಕರಣೆ ಹಾಗೂ ಸಾಗಾಟಕ್ಕೆ ಅವಕಾಶ.

– ಕೋಳಿ, ಕುರಿ ಸಾಕಾಣಿಕೆ ಸೇರಿ ಫಾರ್ಮ್ ಗಳ ಕಾರ್ಯನಿರ್ವಹಣೆಗೆ ಅನುಮತಿ.

– ಪಶು ಆಹಾರ ಉತ್ಪಾದನೆ ಹಾಗೂ ಕಚ್ಚಾವಸ್ತುಗಳ ಸಾಗಾಟಕ್ಕೆ ಅವಕಾಶ.

– ಗೋ ಶಾಲೆ ಸಹಿತ ಪಶು ಆಶ್ರಯ ಕೇಂದ್ರಗಳ ಕಾರ್ಯನಿರ್ವಹಣೆಗೆ ಅವಕಾಶ.

– ಟೀ, ಕಾಫಿ ಮತ್ತು ರಬ್ಬರ್ ಪ್ಲಾಂಟೇಶನ್ ಗಳಿಗೆ ಗರಿಷ್ಠ ಶೇ.50ರಷ್ಟು ಕೆಲಸಗಾರರಿಗೆ ಅವಕಾಶ.

– ಟೀ, ಕಾಫಿ, ರಬ್ಬರ್ ಮತ್ತು ಗೋಡಂಬಿ ಪ್ಯಾಕೇಜ್, ಮಾರಾಟ ಹಾಗೂ ಮಾರ್ಕೆಟಿಂಗ್ ಗೆ ಅವಕಾಶ.

ಕರಾವಳಿ ಭಾಗದಲ್ಲಿ ಮೀನುಗಾರಿಕೆ ಚಟುವಟಿಕೆಗಳಿಗೂ ಲಾಕ್ ಡೌನ್ ನಿಂದ ವಿನಾಯಿತಿಯನ್ನು ನೀಡಲಾಗಿದೆ.

– ಮೀನುಗಾರಿಕೆ, ಪ್ಯಾಕೇಜಿಂಗ್, ಮೀನು ಮಾರಾಟ ಮತ್ತು ಮಾರ್ಕೆಟಿಂಗ್ ಗೆ ಅವಕಾಶ.

– ಮೀನು ಉತ್ಪನ್ನಗಳ ಮಾರಾಟ ಹಾಗೂ ನೌಕರರ ಓಡಾಟಕ್ಕೆ ಅವಕಾಶ.

Advertisement

Udayavani is now on Telegram. Click here to join our channel and stay updated with the latest news.

Next