Advertisement

ಮರಳುಗಾರಿಕೆ ಆರಂಭ

11:27 PM Dec 10, 2019 | mahesh |

ಕುಂದಾಪುರ: ಕೆಲವು ದಿನಗಳಿಂದ ಸ್ಥಗಿತಗೊಂಡಿದ್ದ ಮರಳುಗಾರಿಕೆ ಮಂಗಳವಾರದಿಂದ ಆರಂಭವಾಗಿದೆ. ಕೆಲವು ವರ್ಷಗಳಿಂದ ನಿಂತಿದ್ದ ಮರಳುಗಾರಿಕೆಗೆ ಅನುಮತಿ ದೊರೆತು ಒಂದಷ್ಟು ದಿನ ಮರಳು ಸಾಗಾಟವಾಗಿತ್ತು. ಅನಂತರ ಲಾರಿಯಲ್ಲಿ ಮರಳು ತುಂಬಿಸಿದ ಬಳಿಕ ವೇ ಬ್ರಿಡ್ಜ್ನಲ್ಲಿ ತೂಕ ಮಾಡಿಯೇ ವಿತರಿಸಬೇಕೆಂದು ಜಿಲ್ಲಾಡಳಿತ ಶರತ್ತು ವಿಧಿಸಿದ ಕಾರಣ ಮರಳುಗಾರಿಕೆ ಸ್ಥಗಿತವಾಗಿತ್ತು. ತೂಗದೇ ಮರಳು ನೀಡಿದರೆ ಒದ್ದೆ ಮರಳು ಲಾರಿಯಲ್ಲಿ ತುಂಬಿಸಿ ಹೆಚ್ಚು ತೂಕ ಬಂದು, ಖರೀದಿಸಿದವರಿಗೆ ಮೋಸವಾಗುವ ಸಾಧ್ಯತೆಯನ್ನು ಜಿಲ್ಲಾಡಳಿತ ಮನಗಂಡಿತ್ತು. ಪರಿಣಾಮವಾಗಿ ಗಣಿ ಇಲಾಖೆಯು ಮರಳುಗಾರಿಕೆಗೆ ನೀಡಿದ್ದ ಪರವಾನಿಗೆಯನ್ನು ಅಮಾನತು ಮಾಡಿತ್ತು.

Advertisement

ನೂರಾರು ಲಾರಿಗಳು ಮರಳು ತುಂಬಿಸಿ ಸಾಗಾಟ ಮಾಡಲಾಗದ ಪರಿಸ್ಥಿತಿಯಿದ್ದು, ಪತ್ರಿಕೆಯಲ್ಲಿ ವರದಿ ಪ್ರಕಟವಾದ ಬಳಿಕ ಲೋಡು ಮಾಡಿದ ಲಾರಿಗಳನ್ನು ಕಳುಹಿಸಲು ಗಣಿ ಇಲಾಖೆ ಕ್ರಮ ಕೈಗೊಂಡಿತ್ತು. ಮಂಗಳವಾರದಿಂದ ಮತ್ತೆ ಮರಳುಗಾರಿಕೆ ಆರಂಭವಾಗಿದೆ. ಕಂಡ್ಲೂರು ಮತ್ತು ಬಳ್ಕೂರಿನಲ್ಲಿ ಮರಳು ತೆಗೆಯಲು ಅನುಮತಿ ಇದ್ದು, ಸೋಮವಾರದಿಂದ ಶನಿವಾರದ ವರೆಗೆ ನಿಗದಿಪಡಿಸಿದ ಹಣ ಪಾವತಿಸಿ ಮರಳು ಪಡೆಯಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next