Advertisement

ರಶೀದ್‌ ಕುದ್ರೋಳಿ ಸ್ಮಾರಕ ಪ್ರಶಸ್ತಿ ಸ್ಟಾರ್‌ ಆಫ್‌ ಕೆನರಾಗೆ

05:00 PM Nov 14, 2017 | Team Udayavani |

ಮುಂಬಯಿ: ಕರ್ನಾಟಕ ನ್ಪೋರ್ಟಿಂಗ್‌ ಅಸೋಸಿಯೇಶನ್‌ನ ಆಯೋಜಿತ 11ನೇ ವಾರ್ಷಿಕ ನ್ಯಾಯವಾದಿ ರಶೀದ್‌ ಕುದ್ರೋಳಿ ಸ್ಮಾರಕ ಫುಟ್ಬಾಲ್‌ ಟ್ರೋಫಿಯನ್ನು ಸ್ಟಾರ್‌ ಆಫ್‌ ಕೆನರಾ ತಂಡವು ಗೆದ್ದುಕೊಂಡಿದೆ.

Advertisement

ನ. 11ರಂದು ಚರ್ಚ್‌ಗೇಟ್‌ ಪರಿಸರದ ಅಸೋಸಿಯೇಶನ್‌ನ ಮೈದಾನದಲ್ಲಿ ಜರಗಿದ ಫೈನಲ್‌ ಪಂದ್ಯದಲ್ಲಿ ಬಲಾಡ್ಯ ತಂಡಗಳಾದ ಮೊಗವೀರ ತಂಡ ಹಾಗೂ ಸ್ಟಾರ್‌ ಆಫ್‌ ಕೆನರಾ ತಂಡಗಳು ಸೆಣಸಾಡಿದ್ದು, 3-1ರ ಅಂತರದಿಂದ ಸ್ಟಾರ್‌ ಆಫ್‌ ಕೆನರಾ ತಂಡವು ಮೊಗವೀರ ತಂಡವನ್ನು ಬಗ್ಗುಬಡಿದು ಪ್ರಶಸ್ತಿಯನ್ನು ಮುಡಿ ಗೇರಿಸಿಕೊಂಡಿತು.

ವಿಜೇತ ತಂಡದ ಪರ ನೇಹಾಲ್‌ ಶೆಟ್ಟಿ, ಅಶ್ವಿ‌ನ್‌ ಡಯಾಸ್‌, ಶೆಲ್ಟನ್‌ ರೇಗೋ ಅವರು ಗೋಲು ಹೊಡೆದರೆ, ಪರಾಜಿತ ತಂಡದ ಪರ ದರ್ಶನ್‌ ಕರ್ಕೇರ ಅವರು ಏಕೈಕ ಗೋಲು ಬಾರಿಸಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನಿಸಲಾಯಿತು.

ಅತಿಥಿಗಳಾಗಿ ಪಾಲ್ಗೊಂಡ ಅಂತಾರಾಷ್ಟ್ರೀಯ ಫುಟ್ಬಾಲ್‌ ಆಟಗಾರ ಸ್ಟೀವನ್‌ ಡಯಾಸ್‌, ಮಹಾರಾಷ್ಟ್ರ ತಂಡದ ನಾಯಕ ವಿಜೇತ ಶೆಟ್ಟಿ, ಮಾಜಿ ಆಟಗಾರ ದಾಮೋದರ ಕುಕ್ಯಾನ್‌ ಅವರು ಪ್ರಶಸ್ತಿ ಪ್ರದಾನಿಸಿ ಶುಭ ಹಾರೈಸಿದರು. ಕರ್ನಾಟಕ ನ್ಪೋರ್ಟಿಂಗ್‌ ಅಸೋಸಿಯೇಶನ್‌ ಶಿವಛತ್ರಪತಿ ಪ್ರಶಸ್ತಿ ಪುರಸ್ಕೃತರಾದ ಜಯ ಎ. ಶೆಟ್ಟಿ, ಕೃಷ್ಣ ಶೆಟ್ಟಿ, ಸದಸ್ಯರಾದ ಗೋವಿಂದ ಪುತ್ರನ್‌, ಪ್ರೇಮನಾಥ್‌ ಕೋಟ್ಯಾನ್‌, ಸಾಲ್ಪಡೋರ್‌ ಡಿಸೋಜಾ, ರವಿ ಅಂಚನ್‌, ವಸಂತ ಉಚ್ಚಿಲ್‌, ಸುರೇಶ್‌ ಮೆಂಡನ್‌, ಶೇಖರ್‌ ಬಂಗೇರ, ಸುಕುಮಾರ್‌ ಹತ್ತಂಗಡಿ, ನಾಗರಾಜ ಶೆಟ್ಟಿ, ಜಯಂತ್‌ ಕುಂದರ್‌, ದಯಾ ಅಂಚನ್‌, ಸದಾ ಉಚ್ಚಿಲ್‌ ಮೊದಲಾದವರು ಉಪಸ್ಥಿತರಿದ್ದರು.

ಪಂದ್ಯಾಟದ ಪ್ರಮುಖ ಪ್ರಾಯೋಜಕರಾದ ನ್ಯಾಯವಾದಿ ಶಕೀಲ್‌ ರಶೀದ್‌ ಕುದ್ರೋಳಿ ಅವರು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ, ವಿಜೇತ ತಂಡಗಳನ್ನು ಅಭಿನಂದಿಸಿ ಶುಭ ಹಾರೈಸಿದರು. 
ಫುಟ್ಬಾಲ್‌ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತಂಡಗಳ ಆಟಗಾರರನ್ನು ಪ್ರೋತ್ಸಾಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next