Advertisement

ಸಸಿಹಿತ್ಲು: ಕುಸಿದ ಸ್ಟೇಜ್ ತಪ್ಪಿದ ಅನಾಹುತ : ಅಪಾಯದಿಂದ ಪಾರಾದ ಸಚಿವ ಯೋಗೇಶ್ವರ್

11:10 PM Mar 20, 2021 | Team Udayavani |

ಸಸಿಹಿತ್ಲು: ಇಲ್ಲಿನ ನಂದಿನಿ ಕಡಲತೀರದಲ್ಲಿ ಆಯೋಜಿಸಿದ್ದ ನಂದಿನಿ ಉತ್ಸವ ಉದ್ಘಾಟನೆ ಹಂತದಲ್ಲಿ ನಂದಿನಿ ತಟದಲ್ಲಿ ಹಾಕಿದ್ದ ಸ್ಟೇಜ್ ಕುಸಿದಿದ್ದು ಸಚಿವ ಯೋಗೇಶ್ವರ್ ಸಹಿತ ಗಣ್ಯರು ಪಾರಾಗಿದ್ದಾರೆ.

Advertisement

ನಂದಿನಿ ತಟದಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದ ನಂದಿನಿ ಉತ್ಸವವನ್ನು ಉದ್ಘಾಟನೆ ಮಾಡಲು ಆಗಮಿಸಿದ್ದು ನಂದಿನಿ ನದಿಯ ತಟದಲ್ಲಿ ಹಾಕಿರುವ ವೇದಿಕೆಯ ಮೇಲೆ ಇತರ ಅತಿಥಿಗಳೊಡನೆ ಮೇಲೇರುತ್ತಿದ್ದಂತೆ ವೇದಿಕೆ ಏಕಾಏಕಿ ಕುಸಿದಿದೆ.

ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿ ವೇದಿಕೆ ಕುಸಿಯುತ್ತಿದ್ದಂತೆ ಸಚಿವರು ಹಾಗೂ ಕಟೀಲು ಕ್ಷೇತ್ರದ ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ ಸಹಿತ ಅತಿಥಿಗಳು ಕೆಳಗೆ ಬಿದ್ದಿದ್ದು ನೂಕುನುಗ್ಗಲಿನ ವಾತಾವರಣ ಸೃಷ್ಟಿಯಾಯಿತು.

ಕೂಡಲೇ ಸ್ವಯಂಸೇವಕರು ಕಾರ್ಯಪ್ರವೃತ್ತರಾಗಿ ಅತಿಥಿಗಳನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಿದರು. ಈ ನಡುವೆ ವೇದಿಕೆ ಕುಸಿತ ಕಂಡು ಗಲಿಬಿಲಿ ಜನಜಂಗುಳಿಯ ವಾತಾವರಣ ನಿರ್ಮಾಣವಾಯಿತು.

 

Advertisement

Advertisement

Udayavani is now on Telegram. Click here to join our channel and stay updated with the latest news.

Next