Advertisement

ಜಗಳ ಬಿಡಿಸಲು ಹೋದವನಿಗೇ ಇರಿತ

12:02 PM Feb 26, 2018 | Team Udayavani |

ಬೆಂಗಳೂರು: ಜಗಳ ಬಿಡಿಸಲು ಬಂದ ವ್ಯಕ್ತಿಗೇ ಚಾಕುವಿನಿಂದ ಇರಿದು ದುಷ್ಕರ್ಮಿಗಳು ಪರಾರಿಯಾದ ಘಟನೆ ರಾಮಮೂರ್ತಿನಗರ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದಿದೆ. ದುಷ್ಕರ್ಮಿಗಳಿಂದ ಚಾಕು ಇರಿತಕ್ಕೊಳಗಾಗಿರುವ ಕಾರ್ತಿಕ್‌ಗೆ (35) ಸೇಂಟ್‌ ಜಾನ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಪ್ರಾಣಾಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. 

Advertisement

ಚನ್ನಸಂದ್ರ ನಿವಾಸಿ ಕಾರ್ತಿಕ್‌ ಹಾಗೂ ಆತನ ಸಹೋದರ ಗಿರಿಧರ್‌ ಚನ್ನಸಂದ್ರದ ಎಸ್‌ಎಸ್‌ಆರ್‌ ಕಲ್ಯಾಣಮಂಪದಲ್ಲಿ ಸಂಬಂಧಿಕರೊಬ್ಬರ ವಿವಾಹ ಆರತಕ್ಷತೆಗೆ ತೆರಳಿದ್ದರು. ಕಾರ್ಯಕ್ರಮ ಮುಗಿಸಿ ರಾತ್ರಿ 12  ಗಂಟೆ ಸುಮಾರಿಗೆ ಬೈಕ್‌ನಲ್ಲಿ ಹಿಂತಿರುಗುತ್ತಿದ್ದಾಗ  ಮಾರ್ಗ ಮಧ್ಯೆ ರಸ್ತೆಯಲ್ಲಿ 6 ಜನ ಪರಸ್ಪರ ಜಗಳವಾಡುತ್ತಿರುವುದನ್ನು ಗಮನಿಸಿ ಜಗಳ ಬಿಡಿಸಲು ಮುಂದಾದರು.

ಈ ವೇಳೆ ದುಷ್ಕರ್ಮಿಗಳು ಕಾರ್ತಿಕ್‌ನ ಸೊಂಟದ ಭಾಗಕ್ಕೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಕೂಡಲೇ ಕಾರ್ತಿಕ್‌ನನ್ನು ಜತೆಗಿದ್ದ ಗಿರಿಧರ್‌ ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next