Advertisement

Punjalkatte ಬಾರ್‌ ಬಳಿ ಯುವಕನಿಂದ ಚೂರಿ ಇರಿತ

11:28 PM Jan 03, 2024 | Team Udayavani |

ಪುಂಜಾಲಕಟ್ಟೆ: ಸ್ನೇಹಿತ ರೊಂದಿಗೆ ಬಾರ್‌ಗೆ ಹೋದ ಯುವಕನಿಗೆ ಮತ್ತೊಬ್ಬ ಯುವಕ ಬೈದು, ಚೂರಿಯಿಂದ ಇರಿದ ಘಟನೆ ಬಂಟ್ವಾಳ ತಾಲೂಕಿನ ಬಡಗ ಕಜೆಕಾರು ಪಾಂಡ ವರಕಲ್ಲು ಎಂಬಲ್ಲಿ ಸಂಭವಿಸಿದೆ.

Advertisement

ಸ್ಥಳೀಯರಾದ ಹರ್ಷಿತ್‌ ಎಂ. ಹಾಗೂ ಗೆಳೆಯರಾದ ಪ್ರವೀಣ್‌, ಕೇಶವ ಮತ್ತು ಸನತ್‌ ಅವರೊಂದಿಗೆ ಬಾರ್‌ಗೆ ಬಂದಾಗ ಪರಿಚಿತ ದೇವೊಟ್ಟು ನಿವಾಸಿ ಸುರೇಶ್‌ ಎಂಬಾತ ಹರ್ಷಿತ್‌ ಹಾಗೂ ಸ್ನೇಹಿತ ರನ್ನು ಕಂಡು ಹರ್ಷಿತ್‌ಗೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿ, ಬಳಿಕ ಅವರನ್ನು ಆರೋಪಿ ಸುರೇಶ್‌ ತಡೆದು ನಿಲ್ಲಿಸಿ ಆತನ ಕೈಯಲ್ಲಿದ್ದ ಒಂದು ಸಣ್ಣ ಚೂರಿಯಿಂದ ಹರ್ಷಿತ್‌ಗೆ ಇರಿದಿದ್ದಾನೆ.

ಹಲ್ಲೆಯನ್ನು ತಪ್ಪಿಸಲು ಬಂದಾಗ ಪ್ರವೀಣ್‌ ಅವರಿಗೂ ಚಾಕು ಬೀಸಿದ್ದು ಇದರಿಂದ ಪ್ರವೀಣ್‌ ಅವರ ಎಡ ಕೈ ಅಂಗೈಗೆ ಗಾಯವಾಗಿರುತ್ತದೆ. ಬಳಿಕ ಹರ್ಷಿತ್‌ರ ಗೆಳೆಯರಾದ ಕೇಶವ ಹಾಗೂ ಸನತ್‌ ಅವರು ಆರೋಪಿ ಸುರೇಶ್‌ ಹಲ್ಲೆ ಮಾಡುವುದನ್ನು ತಡೆದಿರುತ್ತಾರೆ. ಹಲ್ಲೆಯಿಂದ ಗಾಯಗೊಂಡ ಪ್ರವೀಣ್‌ ಅವರು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆ ದಿರುತ್ತಾರೆ. ಹಾಗೂ ಹರ್ಷಿತ್‌ ಮಂಗಳೂರು ವೆನ್ಲಾಕ್ ನಲ್ಲಿ ಚಿಕಿತ್ಸೆ ಪಡೆ ದಿದ್ದು, ಹರ್ಷಿತ್‌ ನೀಡಿದ ದೂರಿನಂತೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next