Advertisement

Srirangapatna; ಕಾರಿನಲ್ಲಿ ಜಾನುವಾರು ಸಾಗಾಟ:ಉಸಿರುಗಟ್ಟಿ 6 ಕರುಗಳು ಸಾವು

10:40 PM Jun 03, 2024 | Team Udayavani |

ಶ್ರೀರಂಗಪಟ್ಟಣ: ಕಾರಿನಲ್ಲಿ ಮೈಸೂರಿನ ಕಸಾಯಿಖಾನೆಗೆ ಸಾಗಿಸುತ್ತಿದ್ದ ಜಾನುವಾರುಗಳನ್ನು ಶ್ರೀರಂಗಪಟ್ಟಣ ನಗರ ಠಾಣೆ ಪೊಲೀಸರು ರಕ್ಷಿಸಿದ್ದು, ಈ ಪೈಕಿ 6 ಕರುಗಳು ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ಸೋಮವಾರ ನಗರದಲ್ಲಿ ನಡೆದಿದೆ.

Advertisement

ಈ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಕ್ಕೆ ಪಡೆದಿದ್ದಾರೆ. ಮೈಸೂರಿನ ಗಾಂಧಿನಗರ ನಿವಾಸಿಗಳಾದ ಅರುಣ್‌ ಹಾಗೂ ಸಿರಾಜ್‌ ಬಂಧಿತರು. ಕೆ.ಆರ್‌.ಪೇಟೆಯ ತೆಂಡೆ ಕೆರೆ ಸಂತೆಯಿಂದ ಕರು ಗಳನ್ನು ಮೈಸೂರಿನ ಕಸಾಯಿಖಾನೆಗೆ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ, ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಕಾರಿನಲ್ಲಿ 21 ಜಾನುವಾರುಗಳನ್ನು ತುಂಬಲಾಗಿತ್ತು. ಠಾಣೆಗೆ ಕರೆತಂದ ಬಳಿಕ ಈ ಪೈಕಿ 6 ಕರುಗಳು ಮೃತಪಟ್ಟಿವೆ. ಉಳಿದವುಗಳನ್ನು ಬ್ಯಾಟರಾಯನ ಕೊಪ್ಪಲು ಗ್ರಾಮದ ಬಳಿಯ ಚೈತ್ರಾ ಗೋಶಾಲೆಗೆ ಸಾಗಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next