Advertisement

ಸ್ವತಃ ಜೆಸಿಬಿ ಡ್ರೈವಿಂಗ್ ಮಾಡಿ ಸಶ್ಮಾನ ಸ್ವಚ್ಛತೆ ಮಾಡಿದ ಶ್ರೀರಾಮುಲು

12:21 PM Feb 19, 2022 | Team Udayavani |

ಬಳ್ಳಾರಿ: ಬಳ್ಳಾರಿಯಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ನಸುಕಿನ ಜಾವವೇ ನಗರದ ತಾಳೂರು ರಸ್ತೆಯಲ್ಲಿನ ಹರಿಶ್ಚಂದ್ರನಗರ ಸಶ್ಮಾನಕ್ಕೆ ಭೇಟಿ ಕೊಟ್ಟ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಸ್ವತಃ ಜೆಸಿಬಿ ಡ್ರೈವಿಂಗ್ ಮಾಡಿ ಸ್ವಚ್ಛತಾ ಕಾರ್ಯ ನಡೆಸಿ ಗಮನ ಸೆಳೆದರು.

Advertisement

ಬಳ್ಳಾರಿಯ ತಾಳೂರ ರಸ್ತೆಯ ಸಶ್ಮಾನದಲ್ಲಿ ಸ್ವಚ್ಚತಾ ಕಾರ್ಯ ಮಾಡಿದ ಬಳಿಕ ಮಾತನಾಡಿದ ಅವರು, ಬಳ್ಳಾರಿಯ ೩೦ ಸಶ್ಮಾನಗಳ ಅಭಿವೃದ್ಧಿ ಕ್ರಮ‌ ಕೈಗೊಂಡಿರುವೆ.ಸಶ್ಮಾನಗಳ ಅಭಿವೃದ್ಧಿಗೆ ಕಾಯಕಲ್ಪ ಕಲ್ಪಿಸುವೆ.ಸಶ್ಮಾನದಲ್ಲಿ ಅಂತ್ಯಕ್ರಿಯೆ ಆಗಮಿಸುವವರಿಗೆ ಮೂಲಭೂತ ಸೌಲಭ್ಯಗಳನ್ನ ಕಲ್ಪಿಸಲು ಪಾಲಿಕೆ ಆಯುಕ್ತರಿಗೆ ತಿಳಿಸಿರುವೆ ಎಂದರು.

ಶಾಸಕ ಸೋಮಶೇಖರ್ ರೆಡ್ಡಿ ಕಾಂಗ್ರೆಸ್ ಸೇರ್ಪಡೆ ವದಂತಿ ವಿಚಾರಕ್ಕೆ ಪ್ರತಿಕ್ರಿಯಿಸಿ, ವಿಧಾನಸಭೆಯಲ್ಲಿ ನಾಯಕರ ಜೊತೆ ಮಾತನಾಡುವ ವೇಳೆ ಸೀರಿಯಸ್ ಆಗಿ ಮಾತನಾಡಿಲ್ಲ.ಕಾಂಗ್ರೆಸ್ ಶಾಸಕರು ಸಹ ನನ್ನ ಜೊತೆಗೆ ಇರುತ್ತೇವೆ ಅಂತಾರೆ. ಸಿದ್ದರಾಮಯ್ಯ ಸಹ ಸಾಕಷ್ಟು ಭಾರಿ ಹೇಳಿದ್ದಾರೆ. ನಮ್ಮಗೂ ಅವಕಾಶ ಕೊಡಿ. ನಿಮ್ಮ ಜೊತೆ ಬರುತ್ತೇವೆ ಅಂತಾರೆ. ಸೋಮಶೇಖರ್ ರೆಡ್ಡಿ ಈ ಭಾಗದಲ್ಲಿ ಬಿಜೆಪಿ ಶಕ್ತಿಯಾಗಿದ್ದಾರೆ.ಸೋಮಶೇಖರ್ ರೆಡ್ಡಿ ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಪ್ರಶ್ನೆಯೇ ಬರಲ್ಲ ಎಂದರು.

ಕಾಂಗ್ರೆಸ್ ಹೈಕಮಾಂಡ್ ಕೊಟ್ಟ ಕಷ್ಟಗಳನ್ನ ಅನುಭವಿಸಿದ್ದೇವೆ

Advertisement

ಶಾಸಕ ಸೋಮಶೇಖರ್ ರೆಡ್ಡಿ ಮಾತನಾಡಿ, ನಾನು ರಾಜಕೀಯದಲ್ಲಿ ಇರುವವರೆಗೂ ಬಿಜೆಪಿಯಲ್ಲೆ ಇರುವೆ. ರಾಜಕೀಯ ಬೇಡ ಅಂದ್ರೆ ಮನೆಯಲ್ಲಿ ಇರುವೆ. ಕೊನೆ ಉಸಿರು ಇರುವವರೆಗೂ ಬಿಜೆಪಿಯಲ್ಲೆ ಇರುವೆ. ಸಿದ್ದರಾಮಯ್ಯ ಬಳಿ ನನ್ನ ಫೈಲ್ ಹುಡುಕಲು ಹೋಗಿದ್ದೆ.ಶಾಸಕ‌ ನಾಗೇಂದ್ರ ಕಾಂಗ್ರೆಸ್ ಗೆ ಬರುತ್ತೀರಾ ಅಂದ್ರು. ಬರುತ್ತೇನೆ ಅಂದೆ. ಕಾಂಗ್ರೆಸ್ ಸೇರ್ಪಡೆ ಆಗುವೆ ಅಂತಾ ನಾನು ಹೇಳಿಲ್ಲ.ಕಾಂಗ್ರೆಸ್ ಹೈಕಮಾಂಡ್ ನಮ್ಮ ಕುಟುಂಬಕ್ಕೆ ಕೊಟ್ಟ ಕಷ್ಟಗಳನ್ನ ಮರೆತಿಲ್ಲ.ಕಾಂಗ್ರೆಸ್ ಹೈಕಮಾಂಡ್ ಕೊಟ್ಟ ಕಷ್ಟಗಳನ್ನ ಅನುಭವಿಸಿದ್ದೇವೆ
ಕಷ್ಟಗಳನ್ನ ಅನುಭವಿಸಿ ಕಾಂಗ್ರೆಸ್ ಗೆ ಹೋಗುತ್ತೇವೆ ಅಂದ್ರೆ ನಮ್ಮಷ್ಟು ದಡ್ಡರು ಯಾರು ಇರಲ್ಲ.

Advertisement

Udayavani is now on Telegram. Click here to join our channel and stay updated with the latest news.

Next