Advertisement

ಶೃಂಗೇರಿ: ಶ್ರೀ ಶಂಕರಾಚಾರ್ಯ ರಥೋತ್ಸವ

11:14 PM Apr 26, 2023 | Team Udayavani |

ಶೃಂಗೇರಿ: ಶ್ರೀ ಶಾರದಾ ಪೀಠದಲ್ಲಿ ಶ್ರೀ ಶಂಕರಾಚಾರ್ಯ ರಥೋತ್ಸವ ಬುಧವಾರ ಜರಗಿತು.

Advertisement

ಉಭಯ ಜಗದ್ಗುರುಗಳಾದ ಶ್ರೀ ಭಾರತೀತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಬೆಳಗಿನ ಆಹ್ನಿಕ ಕಾರ್ಯಕ್ರಮ ಮುಗಿಸಿ, ಅಧಿಷ್ಠಾನ ಮಂದಿರಗಳಿಗೆ ಭೇಟಿ ನೀಡಿದರು. ಶ್ರೀಮಠಕ್ಕೆ ಆಗಮಿಸಿದ ಜಗದ್ಗುರುಗಳು ಶ್ರೀಮಠದ ಹೊರ ಪ್ರಾಂಗಣದ ಎಲ್ಲ ದೇಗುಲಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಅನಂತರ ಶ್ರೀಮಠದ ಒಳ ಪ್ರಾಂಗಣದ ಶ್ರೀ ಶಕ್ತಿಗಣಪತಿ ಹಾಗೂ ಶ್ರೀ ಶಾರದಾಂಬೆಗೆ ಪೂಜೆ ಸಲ್ಲಿಸಿ, ಮಂಗಳಾರತಿ ಸ್ವೀಕರಿಸಿದರು.

ಶ್ರೀ ಶಂಕರಾಚಾರ್ಯರ ಉತ್ಸವ ಮೂರ್ತಿಯನ್ನು ವಾದ್ಯ ಮೇಳದೊಂದಿಗೆ ತಂದು ರಥಕ್ಕೆ ಮೂರು ಪ್ರದಕ್ಷಿಣೆ ಹಾಕಲಾಯಿತು. ಮಂಗಳಾರತಿ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳು ರಥಕ್ಕೆ ಅಭಿಮುಖವಾಗಿ ಸಾಗಿದರು. ರಥದ ಎದುರು ಛತ್ರಿ, ಚಾಮರ, ವಾದ್ಯಮೇಳ, ಆನೆ, ಅಶ್ವ ಸಾಗಿದವು. ಶ್ರೀ ಸದ್ವಿದ್ಯಾ ಸಂಸ್ಕೃತ ಪಾಠಶಾಲೆಯ ವಿದ್ಯಾರ್ಥಿಗಳು ವೇದಘೋಷ ಮಾಡಿದರು. ರಥವನ್ನು ಭಾರತಿ ಚೌಕದವರೆಗೆ ಎಳೆದು ಕಟ್ಟೆಬಾಗಿಲು ಗಣಪತಿಗೆ ಪೂಜೆ ಸಲ್ಲಿಸಿ, ಅನಂತರ ಶ್ರೀಮಠಕ್ಕೆ ಎಳೆದು ತರಲಾಯಿತು. ಶ್ರೀಮಠದ ಅ ಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next