Advertisement

ಶೃಂಗೇರಿ ಉಭಯ ಜಗದ್ಗುರುಗಳ ಚಾತುರ್ಮಾಸ್ಯ ವ್ರತ ಸಮಾಪ್ತಿ

06:55 AM Sep 25, 2018 | Team Udayavani |

ಶೃಂಗೇರಿ: ಶೃಂಗೇರಿಯ ಶಾರದಾ ಪೀಠದ ಉಭಯ ಜಗದ್ಗುರುಗಳು ಭಾದ್ರಪದ ಹುಣ್ಣಿಮೆ ದಿನವಾದ ಸೋಮವಾರ
ಚಾತುರ್ಮಾಸ್ಯ ವ್ರತ ಸಮಾಪ್ತಿಗೊಳಿಸಿ ಸೀಮೋಲ್ಲಂಘನ ಮಾಡಿದರು.

Advertisement

ಜು.27ರಿಂದ ಮಠದ ಗುರುನಿವಾಸದಲ್ಲಿ ಈ ವರ್ಷದ ಚಾತುರ್ಮಾಸ್ಯ ವ್ರತ ಕೈಗೊಂಡಿದ್ದ ಉಭಯ ಜಗದ್ಗುರುಗಳಾದ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳು, ಸೆ.24ರಂದು ವ್ರತ ಸಂಪನ್ನಗೊಳಿಸಿ ಮಠಕ್ಕೆ ಆಗಮಿಸಿದರು.

ಬಳಿಕ, ಸುಬ್ರಮಣ್ಯ, ವಿದ್ಯಾಶಂಕರ, ತೋರಣಗಣಪತಿ, ಶಂಕರಾಚಾರ್ಯ ದೇಗುಲ, ಜನಾರ್ಧನ ಸ್ವಾಮಿ ದೇಗುಲಗಳಿಗೆ
ಭೇಟಿ ನೀಡಿ, ನಂತರ ಶಾರದಾ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಕಾಲ್ನಡಿಗೆಯಲ್ಲಿ ಬೆಟ್ಟದ ಮಲಹಾನಿಕರೇಶ್ವರ ಸ್ವಾಮಿ ದೇವಸ್ಥಾನಕ್ಕೆ ಛತ್ರಿ, ಚಾಮರ, ಆನೆ,ವಾದ್ಯಮೇಳ, ದೀವಿಟಿಗೆ ಸಹಿತ ಜಗದ್ಗುರುಗಳು ತೆರಳಿದರು. ಭಕ್ತಾದಿಗಳು ಶ್ರೀಗಳಿಗೆ ಫಲ, ಪುಷ್ಪ ಸಮರ್ಪಿಸಿದರು.

ಚಾತುರ್ಮಾಸ್ಯ ವ್ರತದ ಆರಂಭ ಹಾಗೂ ಸಮಾಪ್ತಿ ನಂತರ ಜಗದ್ಗುರುಗಳು ಬೆಟ್ಟದ ಮಲಹಾನಿಕರೇಶ್ವರ ಸ್ವಾಮಿ
ಸನ್ನಿಧಿಗೆ ತೆರಳುವುದು ಹಿಂದಿನಿಂದಲೂ ನಡೆದು ಬಂದ ಪದ್ಧತಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next