Advertisement

ಪುನರ್ವಸು ಮಳೆ ಬಿರುಸು

12:07 PM Jul 09, 2020 | Naveen |

ಶೃಂಗೇರಿ: ತಾಲೂಕಿನಾದ್ಯಾಂತ ಪುನರ್ವಸು ಮಳೆ ಬಿರುಸಾಗಿದ್ದು, ಮಂಗಳವಾರ ಉತ್ತಮ ಮಳೆಯಾಗಿದೆ. ಕಳೆದ ಎರಡು ದಿನದಿಂದ ಮುಂಗಾರು ಮಳೆ ಜೋರಾಗಿದ್ದು, ಸತತ ಮಳೆಯಿಂದ ತುಂಗಾ ನದಿಯ ನೀರಿನ ಮಟ್ಟ ಏರಿಕೆಯಾಗುತ್ತಿದೆ.

Advertisement

ಮಳೆ ಮುಂದುವರಿದರೆ ಬುಧವಾರ ಪ್ರವಾಹ ಉಂಟಾಗುವ ಸಾಧ್ಯತೆ ಇದೆ. ಸತತ ಮಳೆಯಿಂದ ಶ್ರೀಮಠದ ಸಮೀಪದ ತುಂಗಾ ನದಿಯ ದಂಡೆಯಲ್ಲಿರುವ ಕಪ್ಪೆ ಶಂಕರ ಮುಳುಗಿದೆ.ಮಳೆಯಿಂದ ಸಾಮಾನ್ಯ ಜನ ಜೀವನಕ್ಕೆ ಅಡ್ಡಿಯಾಗಿದ್ದು, ಕೃಷಿ ಚಟುವಟಿಕೆಗೂ ಹಿನ್ನಡೆಯಾಗಿದೆ. ತಾಲೂಕಿನ ನದಿಗಳಾದ ಮಾಲತಿ, ನಂದಿನಿ, ನಳಿನಿ ನದಿಯಲ್ಲಿ ಪ್ರವಾಹ ಉಂಟಾಗಿದೆ. ಗ್ರಾಮೀಣ ಪ್ರದೇಶದ ಹಳ್ಳಗಳು ತುಂಬಿ ಹರಿಯುತ್ತಿವೆ. ಶೃಂಗೇರಿಯಲ್ಲಿ 30 ಹಾಗೂ ಕಿಗ್ಗಾ 61 ಮಿಮೀ ಮಳೆ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next