Advertisement

ಸಿಆರ್‌ಪಿಎಫ್ ವಾಹನದ ಮೇಲೆ ದಾಳಿ: ಸಬ್‌- ಇನ್ಸ್ಪೆಕ್ಟರ್ ಸಾವು

03:45 AM Jun 25, 2017 | |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ರಾಜಧಾನಿ ಶ್ರೀನಗರದ ನೌಹಟ್ಟಾದಲ್ಲಿ ಡಿವೈಎಸ್ಪಿಯನ್ನು ಕಲ್ಲೆಸೆದು ಹತ್ಯೆ ಮಾಡಿ ಒಂದು ದಿನ ಕಳೆದಿಲ್ಲ. ಶನಿವಾರ ರಾಜಧಾನಿಯ ಹೊರ ವಲಯದ ಪಂಥಾ ಚೌಕದಲ್ಲಿ ಸಿಎಆರ್‌ಪಿಎಫ್ ವಾಹನದ ಮೇಲೆ ಉಗ್ರರು ದಾಳಿ ಮಾಡಿದ್ದಾರೆ. ಈ ಘಟನೆಯಲ್ಲಿ ಸಬ್‌- ಇನ್ಸ್ಪೆಕ್ಟರ್ ಹುತಾತ್ಮರಾಗಿ, ಯೋಧರೊಬ್ಬರಿಗೆ ಗಾಯಗಳಾಗಿವೆ. ಹುತಾತ್ಮರಾದ ಸಬ್‌- ಇನ್ಸ್ಪೆಕ್ಟರ್ ರನ್ನು ಶಾಹಿಬ್‌ ಶುಕ್ಲಾ ಮತ್ತು ಗಾಯಗೊಂಡವರನ್ನು ನಿಸಾರ್‌ ಅಹ್ಮದ್‌ ಎಂದು ಗುರುತಿಸಲಾಗಿದೆ.

Advertisement

ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿರುವ ಪಂಥಾ ಚೌಕದಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ರಸ್ತೆ ತೆರವುಗೊಳಿಸುವ ಕಾರ್ಯ ಮುಗಿಸಿ ವಾಹನದಲ್ಲಿ ಕುಳಿತುಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿಯೇ ಉಗ್ರರು ದಾಳಿ ನಡೆಸಿದರು. ಇದೇ ಸಂದರ್ಭದಲ್ಲಿ ಹಠಾತ್‌ ಆಗಿ ರೈಫ‌ಲ್‌ನಿಂದ ಸಿಡಿದ ಗುಂಡು ಕಾನ್‌ಸ್ಟೆàಬಲ್‌ ಒಬ್ಬರ ಕಾಲಿಗೆ ತಗುಲಿ ಗಾಯವಾಯಿತು. ಉಗ್ರರು ದಾಳಿ ನಡೆಸುತ್ತಿದ್ದಂತೆಯೇ ಯೋಧರು ಪ್ರತಿದಾಳಿ ನಡೆಸಿದರು. ಉಗ್ರರ ಕಡೆಯಲ್ಲಿ ಸಾವು ನೋವು ಉಂಟಾಗಿ ರುವ ಬಗ್ಗೆ ಯಾವುದೇ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next