Advertisement

ಶ್ರೀರಾಮುಲು ಸೇರಿ 8 ಗಣ್ಯರಿಗೆ “ಶ್ರೀಮಠ ಸೇವಾಸಕ್ತ’ಪ್ರಶಸ್ತಿ

12:57 AM Feb 20, 2019 | Team Udayavani |

ಕಮತಗಿ: ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ಹೊಳೆ ಹುಚ್ಚೇಶ್ವರ ಸಂಸ್ಥಾನ ಮಠ ನೀಡುವ “ಶ್ರೀಮಠ ಸೇವಾಸಕ್ತ ಪ್ರಶಸ್ತಿ’ಗೆ 8 ಜನರನ್ನು ಆಯ್ಕೆ ಮಾಡಲಾಗಿದೆ. ಮೊಳಕಾಲ್ಮೂರು ಕ್ಷೇತ್ರ ಶಾಸಕ, ಮಾಜಿ ಸಚಿವ ಬಿ.ಶ್ರೀರಾಮುಲು, ಉದ್ಯಮಿ ಬೆಂಗಳೂರಿನ ರಾಜೇಂದ್ರ ಆರ್‌ .ಪಾಟೀಲ, ಲಿಂಗರಾಜ ವಾಲಿ (ಮಾಸ್ಯಾಳ), ಬೆಂಗಳೂರಿನ ಉದ್ಯಮಿ ಎಚ್‌.ಪಿ.ರಾಜಗೋಪಾಲರೆಡ್ಡಿ, ಕಮಲಪ್ಪ ಜಾಲಿಹಾಳ, ಎಚ್‌.ಆರ್‌.ಮೈನ್ಸ್‌ ಎಂಡಿ ರಾಚಪ್ಪ ಸರಡಗಿ, ಡಾ| ರಮೇಶ ಸನ್ನೂರ, ಹನಮಗೌಡ ಪಾಟೀಲ ಅವರಿಗೆ ಫೆ.24ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು.

Advertisement

ಇದೇ ವೇಳೆ ಶ್ರೀಮಠದ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಮಹನೀಯರಿಗೆ “ಗೌರವ ಶ್ರೀರಕ್ಷೆ’ ನೀಡಲಾಗುವುದು. ಜೊತೆಗೆ, “ಹುಚ್ಚೇಶ್ವರ ಶ್ರೀ ಪ್ರಶಸ್ತಿ’ಗೆ ಯೋಜನೆ, ಸಾಂಖೀÂàಕ ಮತ್ತು ಕಾರ್ಯಕ್ರಮ ಅನುಷ್ಠಾನ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ| ಶಾಲಿನಿ ರಜನೀಶ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ನೂತನ ರಥ ನಿರ್ಮಾಣ ಸಮಿತಿ ಅಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ, ಮಠದ ಪೀಠಾಧ್ಯಕ್ಷರಾದ ಶ್ರೀ ಹುಚ್ಚೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next