Advertisement

ಟೀಮ್‌ ಇಂಡಿಯಾದ ಶ್ರೀಲಂಕಾ ಪ್ರವಾಸ : ಮುಂಬಯಿಗೆ ಬಂದ ಧವನ್‌ ಪಡೆ

10:51 PM Jun 15, 2021 | Team Udayavani |

ಮುಂಬಯಿ : ಶ್ರೀಲಂಕಾ ವಿರುದ್ಧ ಸೀಮಿತ ಓವರ್‌ಗಳ ಸರಣಿಗೆ ತೆರಳಲಿರುವ ಭಾರತ ತಂಡದ ಎಲ್ಲ ಸದಸ್ಯರು ಮಂಗಳವಾರ ಮುಂಬಯಿಗೆ ಬಂದಿಳಿದರು.

Advertisement

ಟೀಮ್‌ ಇಂಡಿಯಾ-2 ಮುಂಬ ಯಿಗೆ ಆಗಮಿಸಿರುವ ಚಿತ್ರಗಳನ್ನು ಬಿಸಿಸಿಐ ತನ್ನ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದೆ. ನಾಯಕ ಶಿಖರ್‌ ಧವನ್‌, ಉಪನಾಯಕ ಭುವನೇಶ್ವರ್‌ ಕುಮಾರ್‌, ಪಡಿಕ್ಕಲ್‌, ಕೆ. ಗೌತಮ್‌ ಪಾಂಡ್ಯ ಸಹೋದರರೂ ಸೇರಿದಂತೆ ಇನ್ನೂ ಕೆಲವು ಸದಸ್ಯರ ಸೆಲ್ಫಿಗಳನ್ನು ಬಿಸಿಸಿಐ ಪೋಸ್ಟ್‌ ಮಾಡಿದೆ.

14 ದಿನಗಳ ಕ್ವಾರಂಟೈನ್‌
20 ಸದಸ್ಯರ ತಂಡ ಮುಂಬಯಿ ಯಲ್ಲಿ 14 ದಿನಗಳ ಕಡ್ಡಾಯ ಕ್ವಾರಂಟೈನ್‌ಗೆ ಒಳಗಾಗಲಿದೆ. ಆರಂಭಿಕ ವರದಿಯಂತೆ ಇವರೆಲ್ಲ ಸೋಮವಾರದಿಂದಲೇ ಕ್ವಾರಂಟೈನ್‌ ಆರಂಭಿಸಬೇಕಿತ್ತು. ಶ್ರೀಲಂಕಾ ವಿರುದ್ಧ ಮೊದಲು ಮೂರು ಪಂದ್ಯಗಳ ಏಕದಿನ ಸರಣಿ, ಬಳಿಕ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಮೊದಲ ಏಕದಿನ ಪಂದ್ಯವನ್ನು ಜುಲೈ 13ರಂದು ಆಡಲಾಗುವುದು.

ಇದನ್ನೂ ಓದಿ :ಕೇರಳ ಅರಣ್ಯದಲ್ಲಿ ಸ್ಫೋಟಕ ಪತ್ತೆ: ಪಿಎಫ್ಐ ನಂಟು ಶಂಕೆ

Advertisement

Udayavani is now on Telegram. Click here to join our channel and stay updated with the latest news.

Next