Advertisement

ಶ್ರೀದೇವಿ ನಿಧನ: ಕಾಂಗ್ರೆಸ್‌ ಟ್ವೀಟ್‌ ವಿರುದ್ಧ ತೀವ್ರ ಆಕ್ರೋಶ 

10:46 AM Feb 25, 2018 | |

ಹೊಸದಿಲ್ಲಿ: ಪ್ರಖ್ಯಾತ ನಟಿ ಶ್ರೀದೇವಿ ನಿಧನ ಹೊಂದಿದ ಬಳಿಕ ಕಾಂಗ್ರೆಸ್‌ ತನ್ನ ಅಧಿಕೃತ ಟ್ವೀಟರ್‌ನಲ್ಲಿ ಮಾಡಿದ ಟ್ವೀಟ್‌ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸಾರ್ವಜನಿಕರ ಪ್ರತಿಕ್ರಿಯೆ ನೋಡಿ ಕಾಂಗ್ರೆಸ್‌ ಟ್ವೀಟನ್ನು ಡಿಲೀಟ್‌ ಮಾಡಿದೆ.

Advertisement

ಶ್ರೀದೇವಿ ಅವರಿಗೆ ಸಂತಾಪ ಸೂಚಿಸಿ ನಮ್ಮ ಯುಪಿಎ ಸರಕಾರ  2013 ರಲ್ಲಿ  ಪದ್ಮಶ್ರೀ ಪ್ರಶಸ್ತಿ ನೀಡಿತ್ತು ಎಂದು ಬರೆದಿರುವುದು ಆಕ್ರೋಶಕ್ಕೆ ಗುರಿಯಾಗಿದೆ.

ಟ್ವೀಟ್‌ಗೆ ಸಾವಿರಾರು ಮಂದಿ ಪ್ರತಿಕ್ರಿಯೆ ಬರೆದಿದ್ದು, ಈ ವೇಳೆಯಲ್ಲೂ ನಿಮ್ಮ  ರಾಜಕೀಯ ಬೇಕೆ ಎಂದು ಪ್ರಶ್ನಿಸಿದ್ದಾರೆ. 

ಶ್ರೀದೇವಿ ಅವರು ದುಬೈನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದು , ರಾಷ್ಟ್ರಪತಿ, ಪ್ರಧಾನಿ , ಬಾಲಿವುಡ್‌ ಗಣ್ಯರು ಸೇರಿದಂತೆ ಕೋಟ್ಯಂತರ ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next