Advertisement

ಪೇಜಾವರ ಕಿರಿಯ ಶ್ರೀಗಳ ಮೊದಲ ಮಹಾಪೂಜೆ ಹಿರಿಯ ಶ್ರೀಗಳು ಇಂದು ಮಠಕ್ಕೆ?

07:40 AM Aug 22, 2017 | Team Udayavani |

ಉಡುಪಿ: ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಆರೋಗ್ಯದ ಕಾರಣ ಶ್ರೀಕೃಷ್ಣ ಮಠದಲ್ಲಿ ಸೋಮವಾರ ಮಧ್ಯಾಹ್ನ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಮಹಾಪೂಜೆಯನ್ನು ಇದೇ ಮೊದಲ ಬಾರಿಗೆ ನಡೆಸಿದರು.

Advertisement

ರವಿವಾರ ಮಣಿಪಾಲ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರನ್ನು ಸೋಮವಾರ ಪರಿಶೀಲನೆ ನಡೆಸಿದ ವೈದ್ಯರು ಆಸ್ಪತ್ರೆ ಯಿಂದ ಬಿಡುಗಡೆಗೊಳಿಸಲು ಒಪ್ಪಲಿಲ್ಲ. ಸ್ವಾಮೀಜಿಯವರು ಮಠಕ್ಕೆ ತೆರಳಲು ಉತ್ಸುಕ ರಾಗಿದ್ದರೂ ವೈದ್ಯರ ಒಪ್ಪಿಗೆ ಇಲ್ಲದ ಕಾರಣ ಕಿರಿಯ ಶ್ರೀಗಳಿಗೆ ದೂರವಾಣಿ ಕರೆ ನೀಡಿ “ಪರ್ಯಾಯಕ್ಕೆ ಕುಳಿತುಕೊಳ್ಳುವಾಗಲೇ ಇಬ್ಬರೂ ಜತೆ ಸೇರಿ ಮಾಡುವುದೆಂದು ತಿಳಿಸಿದ್ದೆವು. ಆದ್ದರಿಂದ ನೀವು ಪೂಜೆ ಸಲ್ಲಿಸಿ’ ಎಂದು ತಿಳಿಸಿದರು. 

ಮಧ್ಯಾಹ್ನ 11.30ರ ವರೆಗೂ ಗುರುಗಳು ಬರುತ್ತಾರೆಂದು ಕಾದಿದ್ದ ಕಿರಿಯ ಶ್ರೀಗಳು ಮತ್ತೆ ಮಹಾಪೂಜೆ ನಡೆಸಿದರು. ಇತ್ತ ಆಸ್ಪತ್ರೆಯ ಪ್ರತ್ಯೇಕ ಕೊಠಡಿಯಲ್ಲಿ ತಮ್ಮ ದೈನಂದಿನ ಧಾರ್ಮಿಕ ಕೈಂಕರ್ಯ ಗಳನ್ನು ಪೇಜಾವರ ಶ್ರೀಗಳು ನಡೆಸಿದರು. ಮಂಗಳವಾರ ಆಸ್ಪತ್ರೆಯಿಂದ ಮಠಕ್ಕೆ ಮರಳುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next