Advertisement

ಪೇಜಾವರ ಹಿರಿಯ ಶ್ರೀಗಳಿಂದ ಪ್ರಧಾನಿ ಮೋದಿ ಭೇಟಿ

01:00 PM Jul 18, 2019 | Hari Prasad |

ನವದೆಹಲಿ: ಉಡುಪಿಯ ಅಷ್ಠಮಠಗಳಲ್ಲಿ ಒಂದಾಗಿರುವ ಪೇಜಾವರ ಮಠದ ಹಿರಿಯ ಯತಿಗಳಾಗಿರುವ ಶ್ರೀ ಶ್ರೀ ವಿಶ್ವೇಶತೀರ್ಥಶ್ರೀಪಾದರು ನವದೆಹಲಿಯಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು.

Advertisement

ಇಂದು ಗುರುಪೂರ್ಣಿಮೆಯಾಗಿರುವ ಕಾರಣ ಶ್ರೀಗಳ ಈ ಭೇಟಿ ವಿಶೇಷತೆಯನ್ನು ಪಡೆದುಕೊಂಡಿದೆ. ಈ ಕುರಿತಾಗಿ ಪ್ರಧಾನಿ ಮೋದಿ ಅವರು ತಮ್ಮ ಅಧಿಕೃತ ಫೇಸ್ಬುಕ್ ಅಕೌಂಟ್ ನಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಪೇಜಾವರ ಶ್ರೀಗಳು ತಮ್ಮ ಜೊತೆ ಮಾತುಕತೆ ನಡೆಸುತ್ತಿರುವ ಮತ್ತು ಶ್ರೀಗಳನ್ನು ಸ್ವಾಗತಿಸುವ ಚಿತ್ರಗಳನ್ನು ಮೋದಿ ಅವರು ಇಲ್ಲಿ ಹಂಚಿಕೊಂಡಿದ್ದಾರೆ.

‘ಇಂದು ಬಹಳ ವಿಶೇಷವಾಗಿರುವ ದಿನವಾಗಿದೆ. ಈ ವಿಶೇಷ ದಿನ ನನ್ನ ಪಾಲಿಗೆ ಇನ್ನಷ್ಟು ವಿಶೇಷತೆಗಳನ್ನು ತಂದುಕೊಟ್ಟಿತು, ಇದಕ್ಕೆ ಕಾರಣವಾಗಿದ್ದು ಉಡುಪಿಯ ಪೇಜಾವರ ಮಠಾಧೀಶರಾಗಿರುವ ಶ್ರೀ ಶ್ರೀ ವಿಶ್ವೇಶತೀರ್ಥರೊಂದಿಗೆ ನಾನು ಕಳೆದ ಸಮಯ. ಅವರಿಂದ ಮಾರ್ಗದರ್ಶನವನ್ನು ಪಡೆದುಕೊಳ್ಳುವುದು ಮತ್ತು ಅವರ ಅನುಭವಾಮೃತವನ್ನು ಆಲಿಸುವುದು ನನ್ನ ಸೌಭಾಗ್ಯವೆಂದೇ ಭಾವಿಸಿದ್ದೇನೆ…’ ಎಂದು ಪ್ರಧಾನಿ ಮೋದಿ ಅವರು ಶ್ರೀಗಳ ಜೊತೆ ತಮ್ಮ ಭೇಟಿಯ ಅನುಭವವನ್ನು ಹಂಚಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next