Advertisement

ಬಿಕೋ ಎನ್ನುತ್ತಿರುವ ಕೊಲ್ಲೂರು

01:19 AM Mar 20, 2020 | Sriram |

ಕೊಲ್ಲೂರು: ಕೋವಿಡ್‌ 19 ಕಾರಣ ಇಲ್ಲಿನ ಶ್ರೀ ಮೂಕಾಂಬಿಕಾ ದೇವಸ್ಥಾನದ ಬಸ್‌ನಿಲ್ದಾಣವು ಯಾತ್ರಾರ್ಥಿಗಳಿಲ್ಲದೆ ಬಿಕೋ ಎನ್ನುತ್ತಿದೆ. ದಿನಂಪ್ರತಿ 70 ಖಾಸಗಿ ಬಸ್‌ ಗಳು ಕೊಲ್ಲೂರಿನಿಂದ ಮಂಗಳೂರಿಗೆ ಪ್ರಯಾಣ ಬೆಳೆಸುತ್ತಿದ್ದವು.

Advertisement

ಇದೀಗ ಪ್ರಯಾಣಿಕರ ಸಂಖ್ಯೆ ಕಡಿಮೆ ಯಾಗಿದ್ದು ಗುರುವಾರ ಕೇವಲ 17 ಬಸ್‌ಗಳು ಸಂಚರಿಸಿವೆ. ಕೊಲ್ಲೂರಿನಿಂದ ವಂಡ್ಸೆ, ಕುಂದಾಪುರ, ಉಡುಪಿ, ಮಂಗಳೂರಿಗೆ ಉದ್ಯೋಗ ನಿಮಿತ್ತ ತೆರಳುತ್ತಿರುವವರಿಗೂ ಇದರಿಂದ ಸಮಸ್ಯೆಯಾಗಿದೆ. ಹೆಚ್ಚಿನವರು ಟ್ಯಾಕ್ಸಿಗಳನ್ನು ಅವಲಂಬಿಸುವಂತಾಗಿದೆ.

ಕೊಲ್ಲೂರಿನ ಚರಿತ್ರೆಯಲ್ಲೇ ಮೊದಲೆನ್ನು ವಂತೆ ದೇಗುಲದ ವಿಶೇಷ ಸೇವೆ ಸ್ಥಗಿತ ಗೊಳಿಸಿ ರುವುದರಿಂದ ಭಕ್ತರಿಲ್ಲದೇ ಇಡೀ ಪೇಟೆ ಕಳೆಗುಂದಿದೆ. ಕೊಡಚಾದ್ರಿ ಸಹಿತ ಇನ್ನಿತರ ಪ್ರವಾಸೋದ್ಯಮ ಕೇಂದ್ರಗಳಿಗೆ ತೆರಳಲು ಯಾತ್ರಾರ್ಥಿಗಳಿಲ್ಲದೆ ಇಲ್ಲಿನ ಜೀಪ್‌ ಹಾಗೂ ಟ್ಯಾಕ್ಸಿ ಚಾಲಕ, ಮಾಲಕರೂ ನಷ್ಟ ಅನುಭವಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next