Advertisement

ಮಹೀಂದಾ ರಾಜಪಕ್ಸೆ ಮುಂದಿನ ಪ್ರಧಾನಿ; ಶ್ರೀಲಂಕಾ ನೂತನ ಅಧ್ಯಕ್ಷ ಗೋಟಬಯ ಘೋಷಣೆ

10:08 AM Nov 21, 2019 | Nagendra Trasi |

ಕೊಲಂಬೋ: ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯ ಸಾಧಿಸಿದ್ದ ಗೋಟಬಯ ರಾಜಪಕ್ಸೆ ನಿರೀಕ್ಷೆಯಂತೆ ಶ್ರೀಲಂಕಾದ ಮಾಜಿ ಅಧ್ಯಕ್ಷ, ಹಿರಿಯ ಅಣ್ಣ ಮಹೀಂದಾ ರಾಜಪಕ್ಸೆಯನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

Advertisement

ದಶಕಗಳ ಹಿಂದೆ ಶ್ರೀಲಂಕಾದ ನಾಗರಿಕರ ಯುದ್ಧ, ತಮಿಳ್ ಟೈಗರ್ಸ್ ಅನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಅಂದು ಶ್ರೀಲಂಕಾದ ಅಧ್ಯಕ್ಷರಾಗಿದ್ದ ಮಹೀಂದಾ ರಾಜಪಕ್ಸೆ, ಕಿರಿಯ ಸಹೋದರ ಗೋಟಬಯ ಅವರನ್ನು ಸೇನೆಯ ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದ್ದರು. ನಂತರ ಲಂಕಾ ಸೇನಾ ಪಡೆ ಎಲ್ ಟಿಟಿ ಇ ಪ್ರಭಾಕರ್ ಹಾಗೂ ಪಡೆಯನ್ನು ಹೊಡೆದುರುಳಿಸುವ ಮೂಲಕ ತಮಿಳ್ ಟೈಗರ್ಸ್ ಅಟ್ಟಹಾಸವನ್ನು ಹೆಡೆಮುರಿಕಟ್ಟಿತ್ತು.

ಮಹೀಂದಾ ರಾಜಪಕ್ಸೆ ಅವರು ಶೀಘ್ರವೇ ಪ್ರಧಾನಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ರಾನಿಲ್ ವಿಕ್ರಮಸಿಂಘೆ ಅವರು ಗುರುವಾರ ಬೆಳಗ್ಗೆ ಅಧಿಕಾರದಿಂದ ಕೆಳಗಿಳಿದ ನಂತರ ರಾಜಪಕ್ಸೆ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಸರ್ಕಾರದ ವಕ್ತಾರ ವಿಜಯಾನಂದಾ ಹೆರಾಥ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next