Advertisement

ಏಂಜಲೊ ಮ್ಯಾಥ್ಯೂಸ್‌ ಹೊರಕ್ಕೆ

07:30 AM Feb 07, 2018 | Team Udayavani |

ಕೊಲಂಬೋ: ಮಂಡಿ ನೋವಿನ ಸಮಸ್ಯೆಯಿಂದಾಗಿ ಬಳಲುತ್ತಿರುವ ಶ್ರೀಲಂಕಾ ಏಕದಿನ ತಂಡದ ನಾಯಕ ಏಂಜೆಲೊ ಮ್ಯಾಥ್ಯೂಸ್‌ ಅವರನ್ನು ಬಾಂಗ್ಲಾ  ಪ್ರವಾಸದ  ಇನ್ನುಳಿದ ಪಂದ್ಯಗಳಿಂದ ಕೈಬಿಡಲಾಗಿದೆ. 

Advertisement

ಕಳೆದ ತಿಂಗಳು ಬಾಂಗಾದಲ್ಲಿ ನಡೆದ ತ್ರಿಕೋನ ಏಕದಿನ ಸರಣಿ ವೇಳೆ ಮ್ಯಾಥ್ಯೂಸ್‌ ಗಾಯಕ್ಕೆ ತುತ್ತಾಗಿದ್ದರು. ಗಾಯದ ಸಮಸ್ಯೆಯಿಂದಾಗಿ ಅವರು ಬಾಂಗ್ಲಾ ದೇಶ ವಿರುದ್ಧ ನಡೆಯುವ ಎರಡನೇ ಟೆಸ್ಟ್‌ ಮತ್ತು ಎರಡು ಟಿ20 ಪಂದ್ಯಗಳನ್ನು ಕಳೆದುಕೊಳ್ಳಲಿದ್ದಾರೆ. ಗಾಯದ ಸಮಸ್ಯೆ ಎದುರಿಸುತ್ತಿರುವ ಅವರು ಮಾ. 8ರಿಂದ ಕೊಲಂಬೋದಲ್ಲಿ ಆರಂಭಗೊಳ್ಳಲಿರುವ ಶ್ರೀಲಂಕಾ, ಬಾಂಗ್ಲಾ ಮತ್ತು ಭಾರತ ದೇಶಗಳ ನಡುವಿನ ತ್ರಿಕೋನ ಸರಣಿಯ ವೇಳೆ ಪೂರ್ಣ ಫಿಟ್‌ ಆಗುವ ವಿಶ್ವಾಸದಲ್ಲಿದ್ದಾರೆ.

“ಬಾಂಗ್ಲಾ ವಿರುದ್ಧ ಉಳಿದಿರುವ ಎರಡು ಪಂದ್ಯಗಳಿಗಾಗಿ ಮ್ಯಾಥ್ಯೂಸ್‌ ಅವರನ್ನು ತಂಡದಲ್ಲಿ ಉಳಿಸಿಕೊಂಡು ಅವರು ಹೆಚ್ಚು ಸಮಸ್ಯೆಗೆ ಈಡಾಗುವುದನ್ನು ನಾವು ಬಯಸುವುದಿಲ್ಲ. ಮುಂದಿನ ತಿಂಗಳು ನಡೆಯುವ ತ್ರಿಕೋನ ಸರಣಿಗೆ ಅವರು ಫಿಟ್‌ ಆಗಿ ತಂಡಕ್ಕೆ ಸೇರಿಸಿಕೊಳ್ಳುವ ಯೋಜನೆ ನಮ್ಮದು’ ಎಂದು ಶ್ರೀಲಂಕಾ ಆಯ್ಕೆ ಸಮಿತಿಯ ಗ್ರೇಮ್‌ ಲ್ಯಾಬ್ರೂಯ್‌ ಹೇಳಿದ್ದಾರೆ. ಫೆ. 15 ಮತ್ತು 18ರಂದು ನಡೆಯುವ ಬಾಂಗ್ಲಾ ವಿರುದ್ಧದ  ಎರಡು ಟಿ20 ಪಂದ್ಯಗಳಿಗೆ ಶ್ರೀಲಂಕಾ ತಂಡದ ನಾಯಕತ್ವವನ್ನು ತಿಸರ ಪೆರೆರ ವಹಿಸಿಕೊಳ್ಳುವ ಸಾಧ್ಯತೆಯಿದೆ. 

Advertisement

Udayavani is now on Telegram. Click here to join our channel and stay updated with the latest news.

Next