Advertisement

ODI ಸಮರಕ್ಕೆ ಶ್ರೀಲಂಕಾ ರೆಡಿ: ಏಕದಿನದಲ್ಲೂ ಮೇಲುಗೈ ಭಾರತದ ಗುರಿ

11:54 PM Aug 01, 2024 | Team Udayavani |

ಕೊಲಂಬೊ: ಮೂರು ಪಂದ್ಯಗಳ ಟಿ20 ಸರಣಿ ಕ್ಲೀನ್‌ಸ್ವೀಪ್ ಸಾಧನೆಗೈದ ಭಾರತ ತಂಡವು ಶುಕ್ರವಾರದಿಂದ ಆರಂಭವಾಗುವ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲೂ ಮೇಲುಗೈ ಸಾಧಿಸಲು ಯೋಚಿಸುತ್ತಿದೆ. ಸರಣಿಯ ಮೊದಲ ಪಂದ್ಯ ಇಲ್ಲಿನ ಆರ್‌. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ.

Advertisement

ಸೂರ್ಯಕುಮಾರ್‌ ಯಾದವ್‌ ನೇತೃತ್ವದ ಭಾರತ ತಂಡ ಟಿ20 ಸರಣಿಯಲ್ಲಿ ಅಮೋಘ ನಿರ್ವಹಣೆ ನೀಡಿತಲ್ಲದೇ 3-0 ಅಂತರದಿಂದ ಗೆದ್ದು ಪ್ರಾಬಲ್ಯ ಮೆರೆದಿತ್ತು. ಇದೀಗ ವಿಶ್ವಕಪ್‌ ವಿಜೇತ ತಂಡದ ನಾಯಕರೂ ಆಗಿರುವ ರೋಹಿತ್‌ ಶರ್ಮ ನೇತೃತ್ವದ ಭಾರತೀಯ ತಂಡ ಏಕದಿನ ಸರಣಿಯೂಲ್ಲ ಸಂಪೂರ್ಣ ಹಿಡಿತ ಸಾಧಿಸಲು ಹಾತೊರೆಯುತ್ತಿದೆಯಲ್ಲದೇ ಗೆಲುವಿನ ಅಭಿಯಾನ ಮುಂದುವರಿಸುವ ಗುರಿ ಇಟ್ಟುಕೊಂಡಿದೆ. ಇದು ಹೊಸ ಕೋಚ್‌ ಗೌತಮ್‌ ಗಂಭೀರ್‌ ಅವರ ಮಾರ್ಗದರ್ಶನದಲ್ಲಿ ನಡೆಯಲಿರುವ ಮೊದಲ ಏಕದಿನ ಸರಣಿಯಾಗಿದೆ.

ಖ್ಯಾತ ಆಟಗಾರರಾದ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮ, ಕೆಎಲ್‌ ರಾಹುಲ್‌ ಮತ್ತು ಶ್ರೇಯಸ್‌ ಅಯ್ಯರ್‌ ಅವರೆಲ್ಲ ಮರಳಿದ್ದರಿಂದ ತಂಡ ಬ್ಯಾಟಿಂಗ್‌ನಲ್ಲಿ ಬಲಿಷ್ಠವಾಗಿದೆ. ತಂಡದ ಬೌಲಿಂಗ್‌ ಪಾಳಯವೂ ಉತ್ತಮ ಸ್ಥಿತಿಯಲ್ಲಿದೆ.ಮೊಹಮ್ಮದ್‌ ಸಿರಾಜ್‌, ವಾಷಿಂಗ್ಟನ್‌ ಸುಂದರ್‌, ಅರ್ಷದೀಪ್‌ ಸಿಂಗ್‌, ರಿಯಾನ್‌ ಪರಾಗ್‌, ಅಕ್ಷರ್‌ ಪಟೇಲ್‌ ಅವರನ್ನು ಒಳಗೊಂಡ ತಂಡ ಬೌಲಿಂಗ್‌ನಲ್ಲಿಯೂ ಬಲಷ್ಠವಾಗಿದೆ.

ಪತಿರಣ, ಮಧುಶಂಕ ಹೊರಕ್ಕೆ
ಇದೇ ವೇಳೆ ಚರಿತ ಅಸಲಂಕ ನೇತೃತ್ವದ ಶ್ರೀಲಂಕಾ ತಂಡ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಗಾಯಗೊಂಡಿರುವ ವೇಗಿಗಳಾದ ಮತೀಷ ಪತಿರಣ ಮತ್ತು ದಿಲ್ಶನ್‌ ಮಧುಶಂಕ ಹೊರಬಿದ್ದಿರುವುದರಿಂದ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ. ತಂಡದ ಫೀಲ್ಡಿಂಗ್‌ ಅಭ್ಯಾಸದ ವೇಳೆ ಮಧುಶಂಕ ಅವರ ಎಡ ಕಾಲಿಗೆ ನೋವಾಯಿತು. ಭಾರತ ವಿರುದ್ಧದ ಮೂರನೇ ಟಿ20 ಪಂದ್ಯದ ವೇಳೆ ಚೆಂಡನ್ನು ಹಾರಿ ಹಿಡಿಯುವ ವೇಳೆ ಪತಿರಣ ತೀವ್ರ ಗಾಯೊಂಡರು. ಆ ಪಂದ್ಯದಲ್ಲಿ ಅವರು ಬೌಲಿಂಗ್‌ ಮಾಡಿಲ್ಲ.

Advertisement

ಅವರಿಬ್ಬರ ಅಸುಪಸ್ಥಿತಯಿಂದಾಗಿ ಶ್ರೀಲಂಕಾ ತಂಡ ಮೊಹಮ್ಮದ್‌ ಶಿರಾಜ್‌ ಮತ್ತು ಇಶನ್‌ ಮಾಲಿಂಗ ಅವರನ್ನು ತಂಡಕ್ಕೆ ಸೇರಿಸಲಾಗಿದೆ. ಇವರಲ್ಲದೇ ಮೀಸಲು ಆಟಗಾರರಾಗಿ ಕುಸಲ್‌ ಜನಿತ್‌, ಪ್ರಮೋದ್‌ ಮಧುಶನ್‌ ಮತ್ತು ಜೆಫ್ರಿ ವಂಡರ್‌ಸೇ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ವಿಕೆಟ್‌ ಹಿಂದುಗಡೆ ಉತ್ತಮ ನಿರ್ವಹಣೆ ನೀಡುತ್ತಿರುವ ಕೆಎಲ್‌ ರಾಹುಲ್‌ ಮತ್ತು ರಿಷಭ್‌ ಪಂತ್‌ ಏಕದಿನ ತಂಡದಲ್ಲಿದ್ದಾರೆ. ಏಕದಿನ ಸರಣಿ ವೇಳೆ ಇವರಿಬ್ಬರಲ್ಲಿ ಯಾರನ್ನು ವಿಕೆಟ್‌ಕೀಪಿಂಗ್‌ ನಿರ್ವಹಣೆಗೆ ಆಯ್ಕೆ ಮಾಡಲು ಗಂಭೀರ್‌ ನೇತೃತ್ವದ ಭಾರತೀಯ ತಂಡ ಚಿಂತನೆ ನಡೆಸುತ್ತಿದೆ. ಪಂತ್‌ ಅವರಿಗೆ ಹೋಲಿಸಿದರೆ ಕೆಎಲ್‌ ರಾಹುಲ್‌ ವಿಕೆಟ್‌ ಹಿಂದುಗಡೆ ಮತ್ತು ಬ್ಯಾಟಿಂಗ್‌ನಲ್ಲೂ ಗಮನಾರ್ಹ ನಿರ್ವಹಣೆ ನೀಡಿದ್ದಾರೆ.

ಸ್ಥಳ: ಕೊಲಂಬೊ
ಆರಂಭ: ಮಧ್ಯಾಹ್ನ 2.30
 ಪ್ರಸಾರ: ಸೋನಿ ಸ್ಪೋರ್ಟ್ಸ್

Advertisement

Udayavani is now on Telegram. Click here to join our channel and stay updated with the latest news.

Next