Advertisement

ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು: ಕಾಗದ ಕೊರತೆಯಿಂದ ಪರೀಕ್ಷೆಯೇ ರದ್ದು!

10:07 PM Mar 20, 2022 | Team Udayavani |

ಕೊಲಂಬೊ: ಭಾರತದ ನೆರೆ ರಾಷ್ಟ್ರ ಶ್ರೀಲಂಕಾದಲ್ಲಿ ಆರ್ಥಿಕ ಸಂಕಷ್ಟ ಉಂಟಾಗಿದೆ.

Advertisement

ದೈನಂದಿನ ಬಳಕೆಯ ಸಾಮಾಗ್ರಿಗಳನ್ನು ಆಮದು ಮಾಡಿಕೊಳ್ಳುವುದೇ ಕಷ್ಟವಾಗಿದೆ. ಇದೀಗ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯ ಎದುರಾಗಿದ್ದು, ಪರೀಕ್ಷೆ ಬರೆಸುವುದಕ್ಕೆ ಕಾಗದವೇ ಇಲ್ಲವೆನ್ನುತ್ತಿದೆ ಸರ್ಕಾರ!

ಕಾಗದವನ್ನು ಬೇರೆ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುವುದಕ್ಕೂ ಆರ್ಥಿಕ ಕಷ್ಟ ಕಾಡಿದೆ. ಹಾಗಾಗಿ ಸೋಮವಾರದಿಂದ ನಡೆಯಬೇಕಿದ್ದ ಟರ್ಮ್ ಪರೀಕ್ಷೆಯನ್ನು ಅನಿರ್ದಿಷ್ಟಾವಧಿ ಮುಂದೂಡಲಾಗಿದೆ.

ದೇಶದಲ್ಲಿ ಒಟ್ಟಾರೆಯಾಗಿ 45 ಲಕ್ಷ ವಿದ್ಯಾರ್ಥಿಗಳಿದ್ದು, ಅದರಲ್ಲಿ ಮೂರನೇ ಎರಡು ಭಾಗ ವಿದ್ಯಾರ್ಥಿಗಳಿಗೆ ಈ ಕಾಗದ ಕೊರತೆಯ ಬಿಸಿ ಮುಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next