Advertisement

ಭಾರತ ವಿರುದ್ಧದ ಟೆಸ್ಟ್‌ ಸರಣಿಗೆ ಶ್ರೀಲಂಕಾ ತಂಡ ಪ್ರಕಟ

11:09 PM Feb 26, 2022 | Team Udayavani |

ಕೊಲಂಬೊ: ಭಾರತ ದೆದುರಿನ 2 ಪಂದ್ಯಗಳ ಟೆಸ್ಟ್‌ ಸರಣಿಗೆ ಶ್ರೀಲಂಕಾ ತಂಡ ಪ್ರಕಟಗೊಂಡಿದೆ.

Advertisement

ಸ್ಟಾರ್‌ ಬ್ಯಾಟರ್‌ ದಿಮುತ್‌ ಕರುಣಾರತ್ನೆ ನಾಯಕರಾಗಿದ್ದಾರೆ. ಇದೇ ವೇಳೆ, ಗಾಯಾಳಾದ ಕುಸಲ್‌ ಮೆಂಡಿಸ್‌ ಮತ್ತು ಮಹೀಶ್‌ ತೀಕ್ಷಣ ಉಳಿದೆರಡು ಟಿ20 ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಇವರ ಸ್ಥಾನಕ್ಕೆ ನಿರೋಷನ್‌ ಡಿಕ್ವೆಲ್ಲ ಮತ್ತು ಧನಂಜಯ ಡಿ ಸಿಲ್ವ ಅವರನ್ನು ಸೇರಿಸಿಕೊಳ್ಳಲಾಗಿದೆ. ಇವರಿಬ್ಬರೂ ಟೆಸ್ಟ್‌ ತಂಡದ ಸದಸ್ಯ ರಾಗಿದ್ದಾರೆ. ಕುಸಲ್‌ ಮೆಂಡಿಸ್‌ ಫಿಟ್‌ ಆದರಷ್ಟೇ ಟೆಸ್ಟ್‌ ತಂಡದಲ್ಲಿ ಮುಂದುವರಿಯಲಿದ್ದಾರೆ.

ಟೆಸ್ಟ್‌ ತಂಡ
ದಿಮುತ್‌ ಕರುಣಾರತ್ನೆ (ನಾಯಕ), ಪಥುಮ್‌ ನಿಸ್ಸಂಕ, ಲಹಿರು ತಿರಿಮನ್ನೆ, ಧನಂಜಯ ಡಿ ಸಿಲ್ವ, ಕುಸಲ್‌ ಮೆಂಡಿಸ್‌, ಏಂಜೆಲೊ ಮ್ಯಾಥ್ಯೂಸ್‌, ದಿನೇಶ್‌ ಚಂಡಿಮಾಲ್‌, ಚರಿತ ಅಸಲಂಕ, ನಿರೋಷನ್‌ ಡಿಕ್ವೆಲ್ಲ, ಚಮಿಕ ಕರುಣಾರತ್ನೆ, ರಮೇಶ್‌ ಮೆಂಡಿಸ್‌, ಲಹಿರು ಕುಮಾರ, ಸುರಂಗ ಲಕ್ಮಲ್‌, ದುಷ್ಮಂತ ಚಮೀರ, ವಿಶ್ವ ಫೆರ್ನಾಂಡೊ, ಜೆಫ್ರಿ ವಾಂಡರ್ಸೆ, ಪ್ರವೀಣ್‌ ಜಯವಿಕ್ರಮ, ಲಸಿತ್‌ ಎಂಬುಲೆªàನಿಯ.

Advertisement

Udayavani is now on Telegram. Click here to join our channel and stay updated with the latest news.

Next