Advertisement

ಸುದೀರ್ಘ‌ ಅರ್ಚಕಸೇವೆ, ಅಲಂಕಾರದಲ್ಲಿ ಎತ್ತಿದಕೈ

06:15 AM Mar 15, 2018 | |

ಉಡುಪಿ: ಗೌಡಸಾರಸ್ವತ ಸಮಾಜದ ಪ್ರತಿಷ್ಠಿತ ದೇವಳವಾದ ಉಡುಪಿಯ ಶ್ರೀ ಲಕ್ಷ್ಮೀವೆಂಕಟರಮಣ ದೇವಳಕ್ಕೆ ಶತಮಾನೋತ್ತರ ಇತಿಹಾಸವಿದ್ದರೆ ಇದರಲ್ಲಿ 25 ವರ್ಷ ವೆಂಕಟರಮಣ ದೇವರಿಗೆ ಅರ್ಚಕರಾಗಿ ಸೇವೆ ಸಲ್ಲಿಸಿದವರು ವೇ|ಮೂ| ಬೀಳಗಿ ಶ್ರೀ ಲಕ್ಷ್ಮೀವೆಂಕಟರಮಣ ದಾಮೋದರ ಭಟ್ಟರು. 

Advertisement

122 ವರ್ಷಗಳ ಹಿಂದೆ ಶ್ರೀ ಕಾಶೀಮಠ ಸಂಸ್ಥಾನದ ಶ್ರೀಮದ್‌ ವರದೇಂದ್ರತೀರ್ಥ ಶ್ರೀಪಾದರಿಂದ ಪ್ರತಿಷ್ಠಿತಗೊಂಡ ಈ ದೇವಳದಲ್ಲಿ ಭಟ್ಟರು 37 ವರ್ಷಗಳಿಂದ  ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದರಲ್ಲಿ 25 ವರ್ಷ ವೆಂಕಟರಮಣನಿಗೆ, ಉಳಿದ ವರ್ಷಗಳಲ್ಲಿ ಪರಿವಾರದೇವರಿಗೆ ಅರ್ಚಕರಾಗಿ ಸೇವೆ ಸಂದಿದೆ. ಮಾ. 18 ಯುಗಾದಿಯಂದು ಇವರ 25ನೆಯ ವರ್ಷದ ವೆಂಟಕರಮಣನ ಅರ್ಚಕ ಸೇವೆ ಮುಕ್ತಾಯಗೊಳ್ಳುತ್ತಿದೆ. ಇವರು ಮೂಲತಃ ಶಿರಸಿ ತಾಲೂಕಿನ ಬಿಳಿಗಿಯವರಾದ ಕಾರಣ ಬಿಳಿಗಿ ಭಟ್ಟರೆಂದೇ ಜನಜನಿತ.  ಸ್ವಾತಂತ್ರ್ಯ ಸಿಕ್ಕಿದ ವರ್ಷ ಜನಿಸಿದ ಭಟ್ಟರು ಪ್ರಾಥಮಿಕ ಶಿಕ್ಷಣವನ್ನು ಬಿಳಿಗಿಯಲ್ಲಿ ಪೂರೈಸಿ ವೈದಿಕ ಶಿಕ್ಷಣ, ಜ್ಯೋತಿಷ್ಯಶಾಸ್ತ್ರದ ಶಿಕ್ಷಣವನ್ನು ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದಲ್ಲಿ ಪಡೆದರು. ಬಿಳಿಗಿ ಭಟ್ಟರು ಗೋಕರ್ಣ ಮಠದ ಶ್ರೀಮದ್‌ ದ್ವಾರಕಾನಾಥ  ಸ್ವಾಮಿಗಳಲ್ಲಿದ್ದಾಗ ಇವರ ವೈದಿಕ ಶಿಕ್ಷಣದ ಪ್ರಾವೀಣ್ಯ ನೋಡಿ, ದೇವಳದ ಧರ್ಮದರ್ಶಿ, ಉದ್ಯಮಿ ಐರೋಡಿ ರಾಧಾಕೃಷ್ಣ ಪೈಯವರು ಅರ್ಚಕರಾಗಿ ಬರಲು ವಿನಂತಿಸಿದರು.  ಆ ಪ್ರಕಾರ ಭಟ್ಟರು ಉಡುಪಿಗೆ ಅರ್ಚಕರಾಗಿ ಸೇರ್ಪಡೆಗೊಂಡರು. ಉಡುಪಿಗೆ ಬಂದ ಅನಂತರ ವಿ| ಹಯಗ್ರೀವ ಆಚಾರ್ಯರಲ್ಲಿ ವೇದಾಂತ, ವ್ಯಾಕರಣಗಳನ್ನು ಕಲಿತರು.

ಮೊದಲ ವರ್ಷ ಲಕ್ಷ್ಮೀ ಸನ್ನಿಧಿಯಲ್ಲಿ ಪೂಜಾ ಕೈಂಕರ್ಯ, ಅನಂತರದಲ್ಲಿ ವೆಂಕಟರಮಣ ಸನ್ನಿಧಿಯ ಪೂಜಾ ಕೈಂಕರ್ಯವು ದೊರಕಿತು. ಅದಾಗಿ 21 ವರ್ಷ ಪರ್ಯಂತ ವೆಂಕಟರಮಣನ ಸನ್ನಿಧಿಯಲ್ಲೆ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿದರು. ಇವರಿಗೆ ಮೊದಲಿನಿಂದಲೂ ಬಂದ ದೈವದತ್ತವಾದ ಅನುಗ್ರಹದಿಂದ ದೇವರ ಅಲಂಕಾರಗಳನ್ನುನಡೆಸುವಲ್ಲಿ ಸಿದ್ಧಹಸ್ತ ರಾದರು.  ಇವರ ಅಲಂಕಾರ ಸೇವೆಯನ್ನು ಗಮನಿಸಿ ಕೈವಲ್ಯ ಮಠದ ಶ್ರೀಮದ್‌ ಸಚ್ಚಿದಾನಂದ ಗೌಡಪಾದಾಚಾರ್ಯರು “ಅಲಂಕಾರ ವಿಶಾರದ’ ಬಿರುದನ್ನು ನೀಡಿದ್ದಾರೆ.

ದೇಗುಲದ ಮಹಿಳಾ ಮಂಡಳಿಯವರಿಗೆ ಭಟ್ಟರು ನಾನಾತರದ ವ್ರತಾಚರಣೆ, ಧಾರ್ಮಿಕ ಕಾರ್ಯಕ್ರಮಗಳ ಪರಿಚಯ ಮತ್ತು ಮಾರ್ಗದರ್ಶನಗಳನ್ನಿತ್ತು ಉತ್ತೇಜಿಸಿ ದರು. ಇವರು ಪರಾನ್ನ ಭೋಜನ ನಿಷೇಧ ವ್ರತವನ್ನು 37 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಇವರು ಧಾರ್ಮಿಕ ಜಾಗೃತಿಗಾಗಿ ಸರಳ ಪ್ರಕಟನೆಗಳನ್ನು ಹೊರತಂದಿದ್ದಾರೆ.  ಭಟ್ಟರು ಜ್ಯೋತಿಷ್ಯಶಾಸ್ತ್ರದಲ್ಲಿ ನೈಪುಣ್ಯ ಪಡೆದವರಿದ್ದಾರೆ. ಸುಲಭ ಪರಿಹಾರದ ಮಾರ್ಗದರ್ಶನ ಇವರ ವೈಶಿಷ್ಟé.  

ಅಲಂಕಾರಪ್ರಿಯನಿಗೆ ಅಲಂಕಾರಸೇವಕ
ಭಜನ ಸಪ್ತಾಹಗಳಲ್ಲಿ ಬಿಳಿಗಿ ಭಟ್ಟರು ಮಾಡಿದ ವಿಶೇಷ ಅಲಂಕಾರಗಳು ಪ್ರಸಿದ್ಧವಾಗಿದೆ. ಅನಂತಶಯನ, ಗಂಧಲೇಪಿತ ವೆಂಕಟರಮಣ, ಪಾರ್ಥಸಾರಥಿ, ವಿಠೊಭ, ಸೂರ್ಯನಾರಾಯಣ, ಕಾಳಿಯಮರ್ದನ ಕೃಷ್ಣ, ವಟಪತ್ರಶಾಯಿ, ಮತ್ಸಾéವತಾರ, ಕೂರ್ಮಾವತಾರ, ಗಜಲಕ್ಷಿ¾à, ಸರಸ್ವತಿ, ಗರುಡ ವಾಹನ, ಶ್ರೀದೇವಿ ಭೂದೇವಿ ಸಹಿತ ವೆಂಕಟರಮಣ, ದುರ್ಗಾದೇವಿ ಪೂಲಂಗಿ ಅಲಂಕಾರ, ರಾಮಚಂದ್ರ, ಸತ್ಯಭಾಮಾ, ಜೋಕಾಲೆ ವೆಂಕಟರಮಣ ಹೀಗೆ ನಾನಾ ಬಗೆಯಾಗಿ ಅಲಂಕರಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next