Advertisement

Yakshagana: ಶ್ರೀ ಕ್ಷೇತ್ರ ಧರ್ಮಸ್ಥಳ ಯಕ್ಷಗಾನ ಮೇಳ: ನಾಳೆಯಿಂದ ತಿರುಗಾಟ

03:58 PM Dec 01, 2023 | Team Udayavani |

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ, ಮೇಳದ ಯಜಮಾನ ಡಿ. ಹಷೇìಂದ್ರ ಕುಮಾರ್‌ ನೇತೃತ್ವದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ತಿರುಗಾಟವು ಡಿ. 2ರಂದು ಆರಂಭಗೊಳ್ಳಲಿದೆ.

Advertisement

ಬೆಳಗ್ಗೆ 8.30ಕ್ಕೆ ಶ್ರೀ ಕ್ಷೇತ್ರದ ಗಣಪತಿ ದೇವಸ್ಥಾನದಲ್ಲಿ ನಡೆಯುವ ಪೂಜೆಯ ಬಳಿಕ ಮೇಳದ ಶ್ರೀ ಮಹಾಗಣಪತಿ ದೇವರು ಮೆರವಣಿಗೆಯಲ್ಲಿ ಬಂದು ಮಂಜುಕೃಪಾ (ಅಡಿಗರ ಮನೆ)ದಲ್ಲಿ ವಿರಾಜಮಾನರಾಗಲಿದ್ದಾರೆ. ಮಧ್ಯಾಹ್ನ ಗಣಪತಿ ಹವನ, ಮಹಾಪೂಜೆ ನಡೆಯಲಿದೆ. ಸಂಜೆ ಪೂಜೆಯ ಬಳಿಕ ಸಂಚಾರ ಹೊರಡುವ ಕಾರ್ಯಕ್ರಮ ನಿಗದಿಯಾಗಿರುತ್ತದೆ ಎಂದು ಮೇಳದ ವ್ಯವಸ್ಥಾಪಕರಾದ ಗಿರೀಶ್‌ ಹೆಗ್ಡೆ ಮತ್ತು ಪುಷ್ಪರಾಜ್‌ ಶೆಟ್ಟಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next