Advertisement

ಅದ್ದೂರಿಯಾಗಿ ನೆರವೇರಿದ ಶ್ರೀಬನಶಂಕರಿ ದೇವಿ ಜಾತ್ರಾ ಮಹೋತ್ಸವ

08:04 PM Feb 16, 2022 | Team Udayavani |

ಹನುಮಸಾಗರ : ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರ ಗ್ರಾಮದ ಐತಿಹಾಸಿಕ ಹಿನ್ನಲೆಯಿರುವ ಶ್ರೀಬನಶಂಕರಿ ದೇವಿ ಜಾತ್ರಾ ಮಹೋತ್ಸವದ ರಥೋತ್ಸವ ಸಕಲಮಂಗಲ ವಾದ್ಯಗಳೊಂದಿಗೆ ಬುಧವಾರ ಸಾಯಂಕಾಲ ಭಾರಿ ವಿಜ್ರಂಬಣೆಯಿಂದ ನಡೆಯಿತು .

Advertisement

ವೇ.ಮೂ. ವಿವೇಕಾನಂದ ಮಹಾಸ್ವಾಮಿಗಳ ದಿವ್ಯ ಸಾನಿದ್ಯದಲ್ಲಿ ಗಾಯಿತ್ರಿ ಹೋಮ, ಪಲ್ಲಕ್ಕಿ ಉತ್ಸವ, ಉಚ್ಚಯ್ಯ ಕಾರ್ಯಕ್ರಮಗಳು ಜರುಗಿದವು.

ಶ್ರೀಬನಶಂಕರಿ ದೇವಿ ಈ ಭಾಗದಲ್ಲಿ ವಿಶೇಷ ಪಡಾಡಗಳಿಂದ ಪ್ರಸಿದ್ಧಿ ಹೊಂದಿದ್ದು ವಿಶೇಷ.

ಭಜನೆ:- ವರ್ಷವಿಡಿ ಶ್ರೀಬನಶಂಕರಿ ದೇವಸ್ಥಾನದಲ್ಲಿ ಪ್ರತಿ ಶುಕ್ರವಾರ ದೇವಿಗೆ ಅಭಿಷೇಕ ಭಜನೆ ಹಾಗೂ ಇನ್ನಿತರೆ ಧಾರ್ಮಿಕ ಕಾರ್ಯಕ್ರಮಗಳು ಜರುಗುವವು.

ಪಲ್ಲಕ್ಕಿ ಉತ್ಸವ:- ವರ್ಷವಿಡಿ ಶ್ರೀಬನಶಂಕರಿ ದೇವಸ್ಥಾನದಲ್ಲಿ ಪ್ರತಿ ಪೌರ್ಣಮಿಯ ದಿನದಂದು ಪಲ್ಲಕ್ಕಿ ಉತ್ಸವ ಭಜನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರುಗುವುದು ವಿಷೇಶ.
ಈ ಜಾತ್ರೆಯ ಅಂಗವಾಗಿ ರವಿವಾರ ಸಂಜೆ ರಥೋತ್ಸವದ ಕಳಸದ ಮೇರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಹಲವು ವಾದ್ಯಗಳೊಂದಿಗೆ, ಭಜನೆಯೊಂದಿಗೆ ನಡೆಸಲಾಯಿತು.

Advertisement

ಭಾರತ ಹುಣ್ಣುಮೆಯ ಜಾತ್ರೆಯ ದಿನವಾದ ಇಂದು ಬೆಳಿಗ್ಗೆಯಿಂದಲೆ ಬನಶಂಕರಿ ದೇವಿಗೆ ಅಭಿಶೇಕ , ಹೋಮ ಹವನಗಳು ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಈ ಸಂದರ್ಭದಲ್ಲಿ ದೇವಾಂಗ ಸಮಾಜದ ಅಧ್ಯಕ್ಷ ಅಶೋಕ ಸಿನ್ನೂರ, ವೀರಪ್ಪ ಸಿನ್ನೂರ, ರಾಮನಗೌಡ, ಶಂಕ್ರಪ್ಪ ಸಪ್ಪಂಡಿ, ಬಸವರಾಜ ಸಿನ್ನೂರ, ರವಿ ಸಿನ್ನೂರ, ಮಹಾಂತೇಶ ಅಗಸಿಮುಂದಿನ, ಶ್ರೀನಿವಾಸ ಸಿನ್ನೂರ, ಮಹೇಶ ಹುಲಮನಿ, ರಾಘವೇಂದ್ರ, ಹನಮಂತಗೌಡ ಸಿನ್ನೂರ ಬಸವರಾಜ ಸಿನ್ನೂರ, ರುದ್ರಗೌಡಗೌಡಪ್ಪನವರ, ದೆವಸ್ಥಾನದ ಅರ್ಚಕರಾದ ರಾಘವೆಂದ್ರ ಸಿನ್ನೂರ, ಮಂಜುನಾಥ ಸಿನ್ನೂರ, ರಾಮನಗೌಡ ಸಿನ್ನೂರ, ಸೇರಿದಂತೆ ಪ್ರಮುಖರು ಇದ್ದರು ಬನಶಂಕರಿ ದೇವಿಯ ರಥೋತ್ಸವದ ಹಗ್ಗವನ್ನು ಮಡಿಕ್ಕೇರಿ ಗ್ರಾಮದ ಮೂಲಕ ಮೆರವಣಿಗೆಯಲ್ಲಿ ಬಂದ ಬಳಕ ಬುಧವಾರ ಸಾಯಂಕಾಲ ಬನಶಂಕರಿ ರಥೋತ್ಸವದಲ್ಲಿ ಹನುಮಸಾಗರ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಸಾವಿರಾರು ಭಕ್ತರ ಪಾಲ್ಗೊಂಡರು.

ಈ ರಥೋತ್ಸವದಲ್ಲಿ “ಬನಶಂಕರಿ ನಿನ್ ಪಾದಕ್ ಶಂಬೂಕೋ” ಎಂಬ ವೇದಘೋಷಣೆ ಭಕ್ತರ ಕೂಗು ಮುಗಿಲು ಮುಟ್ಟಿತು ರಥೋತ್ಸವದ ಬಳಿಕ ಬಾನಂಗಳದಲ್ಲಿ ಪಟಾಕ್ಷಿಗಳ ಬಣ್ಣಬಣ್ಣದ ಚಿತ್ತಾರ ಜನರನ್ನು ಆಕರ್ಷಿಸಿತು.

Advertisement

Udayavani is now on Telegram. Click here to join our channel and stay updated with the latest news.

Next