Advertisement

“ಎಲ್ಲರ ಮನೆ ಮನಗಳಲ್ಲಿ ಶ್ರೀಗಳು ನೆಲೆಸಿದ್ದಾರೆ’: ದರ್ಶನ್

10:58 AM Jan 21, 2019 | Team Udayavani |

ಸಿದ್ಧಗಂಗಾಶ್ರೀ, ನಡೆದಾಡುವ ದೇವರು, ಶಿವೈಕ್ಯರಾದ್ದರಿಂದ ಸ್ಯಾಂಡಲ್​ವುಡ್​ನಲ್ಲೂ ದುಃಖದ ವಾತಾವರಣ ಮಡುಗಟ್ಟಿದೆ. ಸಾವಿರಾರು ಕಲಾವಿದರು ಶ್ರೀಗಳು ಇಹಲೋಕ ತ್ಯಜಿಸಿರೋ ಸುದ್ದಿಯಿಂದ ಕಣ್ಣೀರಿಡುತ್ತಿದ್ದಾರೆ. ಇದೀಗ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್​ ಕೂಡ ಕಂಬನಿ ಮಿಡಿದಿದ್ದು, ಸಂತಾಪ ಸೂಚಿಸಿದ್ದಾರೆ.

Advertisement

ಈ ಬಗ್ಗೆ ದರ್ಶನ್ ತಮ್ಮ ಟ್ವೀಟರ್ ಖಾತೆಯಲ್ಲಿ “ನಡೆದಾಡುವ ದೇವರು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಜಿ ಇಹಲೋಕ ತ್ಯಜಿಸಿರುವುದು ಬಹಳ ನೋವಿನ ಸಂಗತಿ. ಇಷ್ಟು ದಿನ ಭಕ್ತರ ದರ್ಶನಕ್ಕೆ ಅವರಿದ್ದರು, ಈಗ ದೈಹಿಕವಾಗಿ ನಮ್ಮನ್ನು ಅಗಲಿದರೂ ಎಲ್ಲರ ಮನೆ ಮನಗಳಲ್ಲಿ ಅವರು ಭದ್ರವಾಗಿ ನೆಲೆಸಿದ್ದಾರೆ’. ಎಂದು ಟ್ವೀಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next