Advertisement

ಬರಿಗಾಲಲ್ಲಿ ಬಂದು ಹರಕೆ ತೀರಿಸಿದ ಶ್ರೀರಾಮುಲು

06:20 AM May 27, 2018 | Team Udayavani |

ನಾಯಕನಹಟ್ಟಿ: ಮೊಳಕಾಲ್ಮೂರು ಕ್ಷೇತ್ರದ ಶಾಸಕ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ಶ್ರೀರಾಮುಲು ಶನಿವಾರ ಇಲ್ಲಿನ ಗುರು ತಿಪ್ಪೇರುದ್ರಸ್ವಾಮಿ ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.

Advertisement

ಶಬರಿಮಲೆ ಅಯ್ಯಪ್ಪಸ್ವಾಮಿ ಮಾಲೆ ಧರಿಸಿದ್ದ ಅವರು ಬಳ್ಳಾರಿಯಿಂದ ಆಗಮಿಸಿದರು. ಸಹೋದರಿ, ಮಾಜಿ ಸಚಿವೆ
ಜೆ. ಶಾಂತಾ ಅವರೊಂದಿಗೆ ಬರಿಗಾಲಿನಲ್ಲಿ ದೇವಾಲಯಕ್ಕೆ ಆಗಮಿಸಿದರು. ನಂತರ ತೂಗುಮಂಚದ ಸ್ವಾಮಿಗೆ ತೊಟ್ಟಿಲು ತೂಗಿ ಹರಕೆ ತೀರಿಸಿದರು.

ಈ ವೇಳೆ, ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ನಾನು ಪ್ರತಿ ವರ್ಷವೂ ಅಯ್ಯಪ್ಪಸ್ವಾಮಿ ಮಾಲೆ ಹಾಕುತ್ತೇನೆ. ಈ ಬಾರಿ ಚುನಾವಣೆ ಇದ್ದಿದ್ದರಿಂದ ತಡವಾಗಿದೆ.ಆದಷ್ಟು ಬೇಗ ಶಬರಿಮಲೆಗೆ ತೆರಳುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next