Advertisement

ಶ್ರೀರಾಮುಲುಗೆ ಭಿನ್ನಮತ ಸರಿಪಡಿಸುವ ಸಾಮರ್ಥ್ಯ ಇದೆ

06:45 AM Apr 14, 2018 | Team Udayavani |

ಹುಬ್ಬಳ್ಳಿ: ಪಕ್ಷದ ತೀರ್ಮಾನದ ಮೇರೆಗೆ ಶ್ರೀರಾಮುಲು ಅವರಿಗೆ ಮೊಳಕಾಲ್ಮೂರು ಕ್ಷೇತ್ರಕ್ಕೆ ಟಿಕೆಟ್‌ ನೀಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ. 

Advertisement

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿ, ತಿಪ್ಪೇಸ್ವಾಮಿಯವರು ಕೂಡ ಆ  ಕ್ಷೇತ್ರದಿಂದ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ರಾಮುಲು ಅವರಿಗೇ ಟಿಕೆಟ್‌ ನೀಡಿರುವುದರಿಂದ ಸಹಜವಾಗಿ ತಿಪ್ಪೇಸ್ವಾಮಿ ಹಾಗೂ ಅವರ ಬೆಂಬಲಿಗರಿಗೆ ನೋವಾಗಿರಬಹುದು. ಇದು ಭಿನ್ನಮತವಲ್ಲ, ಪಕ್ಷದೊಳಗಿನ ಆಂತರಿಕ ಸಮಸ್ಯೆಯಷ್ಟೇ. ತಿಪ್ಪೇಸ್ವಾಮಿ ಹಾಗೂ ಅವರ ಬೆಂಬಲಿಗರನ್ನು ಸಮಾಧಾನ ಪಡಿಸುವ ಸಾಮರ್ಥ್ಯ ಶ್ರೀರಾಮುಲು ಅವರಿಗಿದೆ. ಒಂದೆರಡು ದಿನಗಳಲ್ಲಿ ಎಲ್ಲವೂ ಪರಿಹಾರವಾಗಲಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next