Advertisement
ತುಳುನಾಡಿನ ಜನ ಹಬ್ಬಗಳ ಸಮಯದಲ್ಲಿ ವಿಶೇಷವಾದ ತಿಂಡಿ ತಿನಿಸುಗಳನ್ನು ಸಿದ್ಧಪಡಿಸುತ್ತಾರೆ. ಅಂತಹ ತಿನಿಸುಗಳ ಪೈಕಿ ಮೂಡೆಯೂ ಒಂದು. ಅಷ್ಟಮಿಗೂ ಮೂಡೆಗೂ ಅವಿನಾಭಾವ ಸಂಬಂಧ. ಇತ್ತೀಚಿನ ದಿನಗಳಲ್ಲಿ ಮೂಡೆ ವರ್ಷದ ಎಲ್ಲ ದಿನಗಳಲ್ಲೂ ಲಭ್ಯವಾಗಿದ್ದರೂ ಅಷ್ಟಮಿಯ ಮೂಡೆಗೆ ವಿಶೇಷವಿದೆ. ಪ್ರಕೃತಿದತ್ತ ಪರಿಕರದ ಸಹಾಯದಿಂದ ತಯಾರಿಸಲಾಗುವ ಮೂಡೆ ರುಚಿಕರ ಹಾಗೂ ಆರೋಗ್ಯಕ್ಕೂ ಹಿತಕರ. ಆಧುನಿಕ ಭರಾಟೆಯಿಂದಾಗಿ ಇಂತಹ ಹಲವಾರು ತಿನಿಸುಗಳು ಮರೆತು ಹೋದರೂ ಮೂಡೆ ಮಾತ್ರ ಹಲವಾರು ಮನೆಗಳಲ್ಲಿ ಇನ್ನೂ ಉಳಿದುಕೊಂಡಿದೆ.
ಸಾಂಪ್ರದಾಯಿಕ ಮೂಡೆ ಎಲೆ ಕೂಡ ದುಬಾರಿಯಾಗಿದೆ. ಉಡುಪಿಯಲ್ಲಿ ಶುಕ್ರವಾರ 100 ರೂಪಾಯಿಗೆ 8 ಸಿಗುತ್ತಿದ್ದು ಮುಂಡೇವು ಎಲೆ ಶನಿವಾರದಂದು 100 ರೂ.ಗೆ 6 ಮಾತ್ರ ಸಿಗುತ್ತಿದೆ. ಇನ್ನು ಹಲಸಿನ ಎಲೆ ಕೊಟ್ಟೆಗಳು 20 ರೂ.ಗೆ 6ರಂತೆ ಮಾರಾಟವಾಗುತ್ತಿದೆ. ಪ್ರಕೃತಿದತ್ತವಾಗಿ ಸಿಗುವ ಮುಂಡೇವು ಎಲೆ ಮೂಡೆ ತಯಾರಿಕೆ ಮೂಲ ವಸ್ತು. ಹಿಂದೆ ಪ್ರತಿ ಮನೆಯಲ್ಲಿ ತಮಗೆ ಬೇಕಾದ ಎಲೆಯಲ್ಲಿ ತಾವೇ ತಯಾರಿಸುತ್ತಿದ್ದರು. ಈಗ ಬೇಕಿದ್ದರೆ ಮಾರುಕಟ್ಟೆಗೆ ಹೋಗಬೇಕು. ಅದೂ ಕೂಡ ಎಲ್ಲ ಕಡೆ ಲಭ್ಯ ವಿರುವುದಿಲ್ಲ. ಇದನ್ನು ತಯಾರಿಸುತಿದ್ದವರ ಸಂಖ್ಯೆ ಇಂದು ಬೆರಳೆಣಿಕೆಯಷ್ಟು ಮಾತ್ರ ಕಾಣಸಿಗುತ್ತದೆ. ಆಧುನಿಕರಣದ ಧಾವಂತದಲ್ಲಿ ಇಂದು ಮೂಡೆ ಕಟ್ಟುವ ಕಲೆಗಾರಿಕೆಯಲ್ಲಿ ಯಾರಿಗೂ ಆಸಕ್ತಿ ಇಲ್ಲ.
Related Articles
Advertisement
ಅಷ್ಟಮಿಗೆ ಒಂದೆರಡು ದಿನ ಉಡುಪಿ ರಥಬೀದಿಯ ಕಾಣ ಸಿಗುತ್ತದೆ. ಕೆಲವಡೆ ಅಂಗಡಿಗಳ ಮುಂದೆ ಕೇದಗೆಯ ಗರಿ ಮಾಡಿಕೊಂಡು ಮೂಡೆ ಒಲಿಯಲ್ಲಿ ಕಟ್ಟಿ ಮಾರುವವರು ಕಂಡುಬರುತ್ತಾರೆ.