Advertisement

ಸ್ಪುಟ್ನಿಕ್ ವಿ ಲಸಿಕೆಗಳ ಪೂರೈಕೆಯಲ್ಲಿ ವಿಳಂಬ : ಆಸ್ಪತ್ರೆಗಳು

02:45 PM Jun 27, 2021 | Team Udayavani |

ನವ ದೆಹಲಿ : ದೇಶದಲ್ಲಿ ಲಸಿಕೆ ಅಭಾವ ಎಂಬ ಮಾತುಗಖು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ಸಾಕ್ಷಿ ಎಂಬಂತೆ ರಾಷ್ಟ್ರ ರಾಜಧಾನಿಯ ಹಲವು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಯ ಅಭಾವ ಹಾಗೂ ಪೂರೈಕೆಯ ವಿಳಂಬದ ಬಗ್ಗೆ ಅಲ್ಲಿನ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Advertisement

ದೆಹಲಿ-ಎನ್‌ಸಿಆರ್ ಪ್ರದೇಶದ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ರಷ್ಯಾದ ಕೋವಿಡ್ -19 ಲಸಿಕೆ ‘ಸ್ಪುಟ್ನಿಕ್ ವಿ’ ಪೂರೈಕೆಯಲ್ಲಿ ವಿಳಂಬವಾಗುತ್ತಿದೆ. “ಲಸಿಕೆ ಯಾವಾಗ ಪೂರೈಸಲಾಗುತ್ತದೆ ಎನ್ನುವುದರ ಬಗ್ಗೆ ನಮಗೆ ಸ್ಪಷ್ಟತೆ ಇಲ್ಲ”  ಎಂದು ಇಂದು(ಭಾನುವಾರ, ಜೂನ್ 27) ಅಪೊಲೊ ಆಸ್ಪತ್ರೆಗಳ ವಕ್ತಾರರು ತಿಳಿಸಿದ್ದಾರೆ.

ಇದನ್ನೂ ಓದಿ : ಜಮ್ಮು ವಾಯುನೆಲೆಯಲ್ಲಿ ಸ್ಫೋಟ : ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧಿಕಾರಿಗಳೊಂದಿಗೆ ಚರ್ಚೆ 

ಜೂನ್ 25 ರಿಂದ ಎರಡನೇ ಡೋಸ್ ಲಸಿಕೆಯನ್ನು ನೀಡುವ ಮೊದಲ ಹಂತದ ಕಾರ್ಯ ನಡೆಯಲಿದೆ ಎಂದು ಈ ಹಿಂದೆ ಹೇಳಲಾಗಿತ್ತು. ಆದರೇ, ಈಗ ಮತ್ತೆ ಲಸಿಕೆಗಳ ಕೊರತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಧುಕರ್ ರೇನ್ಬೋ ಮಕ್ಕಳ ಆಸ್ಪತ್ರೆಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಈವರೆಗೆ ದೇಶದ ಲಸಿಕೆಯ ಮಾರುಕಟ್ಟೆ ಪಾಲುದಾರರಾದ ಹೈದರಾಬಾದ್ ಮೂಲದ ಡಾ. ರೆಡ್ಡಿ’ಸ್ ಲ್ಯಾಬೊರೇಟರೀಸ್ ನಿಂದ ಯಾವುದೇ ಪ್ರಮಾನದ ಸ್ಪುಟ್ನಿಕ್ ಲಸಿಕೆಗಳು ಪೂರೈಕೆಯಾಗಿಲ್ಲ ಎಂದಿದ್ದಾರೆ.

Advertisement

ಇನ್ನು, ಈ ಬಗ್ಗೆ ಡಾ. ರೆಡ್ಡಿ’ಸ್ ಲ್ಯಾಬೊರೇಟರೀಸ್ ನಿಂದ ಲಸಿಕೆಯ ಪೂರೈಕೆಯಲ್ಲಿನ ವಿಳಂಬದ ಬಗ್ಗೆ ಯಾವುದೇ ಕಾರಣಗಳು ದೊರಕಿಲ್ಲ. ಯಾವುದೇ ರೀತಿಯಲ್ಲಿ ಅಧಿಕೃತವಾಗಿ ಯಾವುದೇ ಮಾಹಿತಿ ಲಭ್ಯವಿಲ್ಲ. ಎರಡೂ ಡೋಸ್ ಗಳು ಒಟ್ಟಿಗೆ ಪೂರೈಸುವ ಕಾರಣದಿಂದಾಗ ವಿಳಂಭವಾಗುತ್ತಿರಬಹುದು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಇನ್ನು,  ತನ್ನ ಗುರಗಾಂವ್ ಮತ್ತು ಮೊಹಾಲಿ ಆಸ್ಪತ್ರೆಗಳಲ್ಲಿ ಸ್ಪುಟ್ನಿಕ್ ವಿ ಲಭ್ಯವಾಗಲಿದೆ ಎಂದು ಹೇಳಿದ್ದ ಫೋರ್ಟಿಸ್ ಹೆಲ್ತ್‌ಕೇರ್, ರಷ್ಯಾದ ಲಸಿಕೆಯನ್ನು ಇಲ್ಲಿಯವರೆಗೆ ಜನರಿಗೆ ನೀಡಲು ಪ್ರಾರಂಭಿಸಿಲ್ಲ.

ರಷ್ಯಾದ ಗಮಲೇಯ ನ್ಯಾಷನಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಅಂಡ್ ಮೈಕ್ರೋಬಯಾಲಜಿ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ ಮತ್ತು ರಷ್ಯಾದ ನೇರ ಹೂಡಿಕೆ ನಿಧಿ (ಆರ್  ಡಿ ಐ ಎಫ್) ಇದನ್ನು ಜಾಗತಿಕವಾಗಿ ಮಾರಾಟ ಮಾಡುತ್ತಿದೆ.

ಡಾ. ರೆಡ್ಡಿ ಅವರ ಲ್ಯಾಬೋರೆಟರೀಸ್ ರಷ್ಯಾದಿಂದ ಸ್ಪುಟ್ನಿಕ್ ವಿ ಲಸಿಕೆಗಳನ್ನು ಆಮದು ಮಾಡಿಕೊಳ್ಳುತ್ತಿವೆ. ಕಾಲಕ್ರಮೇಣ, ಲಸಿಕೆ ಭಾರತದಲ್ಲಿಯೂ ತಯಾರಾಗಲಿದೆ.

ಖಾಸಗಿ ಕೋವಿಡ್  -19 ವ್ಯಾಕ್ಸಿನೇಷನ್ ಕೇಂದ್ರಗಳಿಗೆ (ಸಿವಿಸಿ) ಸ್ಪುಟ್ನಿಕ್ ವಿ ಲಸಿಕೆಯ ಬೆಲೆಯನ್ನು ಕೇಂದ್ರವು ಪ್ರತಿ ಡೋಸ್‌ ಗೆ 1,145 ರೂ. ನಿಗದಿಗೊಳಿಸಿದ್ದು,  ಕೋವಿಶೀಲ್ಡ್ ನ ಗರಿಷ್ಠ ಬೆಲೆಯನ್ನು ಪ್ರತಿ ಡೋಸ್‌ ಗೆ 780 ರೂ, ಕೋವಾಕ್ಸಿನ್‌ ನ ಪ್ರತಿ ಡೋಸ್‌ ಗೆ 1,410 ರೂ. ನಿಗದಿಗೊಳಿಸಿದೆ.

ಇದನ್ನೂ ಓದಿ : ಮುಂದಿನ ಸಿಎಂ ಬಗ್ಗೆ ಬಹಿರಂಗ ಹೇಳಿಕೆ ನೀಡುವ ಅಧಿಕಾರ ಶಾಸಕರಿಗಿಲ್ಲ: ಕಾಂಗ್ರೆಸ್ ಶಿಸ್ತುಸಮಿತಿ

Advertisement

Udayavani is now on Telegram. Click here to join our channel and stay updated with the latest news.

Next