Advertisement

ಬೆಂಗಳೂರಿನಿಂದ ಬಂದ ಸ್ಪೈಸ್‌ ಜೆಟ್‌ ದಿಲ್ಲಿಯಲ್ಲಿ ತುರ್ತು ಭೂಸ್ಪರ್ಶ

11:12 AM Jan 06, 2017 | udayavani editorial |

ಹೊಸದಿಲ್ಲಿ : ಬೆಂಗಳೂರಿನಿಂದ 176 ಮಂದಿಯನ್ನು ಹೊತ್ತೂಯ್ಯುತ್ತಿದ್ದ  ಸ್ಪೈಸ್‌ ಜೆಟ್‌ ವಿಮಾನ ಇಂದು ಬೆಳಗ್ಗೆ 8.45ರ ಹೊತ್ತಿಗೆ  ದಿಲ್ಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಭೂಸ್ಪರ್ಶ ಮಾಡಿರುವುದಾಗಿ ವರದಿಯಾಗಿದೆ.

Advertisement

ವಿಮಾನದಲ್ಲಿನ ಹೈಡ್ರಾಲಿಕ್‌ ವ್ಯವಸ್ಥೆಯಲ್ಲಿನ ತಾಂತ್ರಿಕ ದೋಷದ ಕಾರಣ ಈ ತುರ್ತು ಭೂಸ್ಪರ್ಶ ನಡೆಯಿತೆಂದು ಅಧಿಕಾರಿಗಳು ತಿಳಿಸಿದ್ದಾರೆ.

ತುರ್ತು ಭೂಸ್ಪರ್ಶದ ಪರಿಣಾಮವಾಗಿ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ  ಅಥವಾ ವಿಮಾನಕ್ಕೆ ಹಾನಿಯಾಗಿಲ್ಲ ಎಂದು ತಿಳಿಸಲಾಗಿದೆ. ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿ ಪಾರಾಗಿರುವುದಾಗಿ ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next