Advertisement

ಟ್ರಕ್‌ ಪಲ್ಟಿಯಾಗಿ ಏಳು ಜನರ ದಾರುಣ ಸಾವು, ಐವರಿಗೆ ಗಾಯ

09:56 AM Aug 14, 2019 | Team Udayavani |

ಉತ್ತರ ಪ್ರದೇಶ: ಟ್ರಕ್‌  ಪಲ್ಟಿಯಾಗಿ ಏಳು ಜನ ಮೃತಪಟ್ಟು, ಕನಿಷ್ಠ ಐವರು ಗಾಯಗೊಂಡ ಘಟನೆ ಇಂದು ಮುಂಜಾನೆ ಉತ್ತರ ಪ್ರದೇಶದ ಬದೌನ್‌ ನಲ್ಲಿ ನಡೆದಿದೆ.

Advertisement

ಗಾಯಾಳುಗಳನ್ನು ಸ್ಥಳಿಯ ಆಸ್ಪತ್ರೆಗೆ ಸೇರಿಸಲಾಗಿದೆ. ಟ್ರಕ್‌ ಚಾಲಕನ ಅತೀ ವೇಗದ ಚಾಲನೆಯೇ ಈ ಅಪಘಾತಕ್ಕೆ ಕಾರಣವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿಕೆ ನೀಡಿದ್ದಾರೆ.

ಗೋಧಿ ತುಂಬಿದ ಚೀಲಗಳನ್ನು ತುಂಬಿ ಬರುತ್ತಿದ್ದ ಟ್ರಕ್‌ ತಿರುವಿನಲ್ಲಿ ಪಲ್ಟಿಯಾಗಿದೆ. ಟರ್ನ್‌ ಮಾಡುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಹತ್ತಿರದ ಚಹಾದಂಗಡಿಯ ಮೇಲೆ ಟ್ರಕ್‌ ಬಿದ್ದಿದೆ. ಚಹಾದಂಗಡಿಯ ಬಳಿ ನಿಂತಿದ್ದ ಜನರು ಅದರಡಿಯಲ್ಲಿ ಸಿಲುಕಿದ್ದಾರೆ ಎಂದು ವರದಿಯಾಗಿದೆ.

ಸ್ಥಳಿಯ ಶಾಸಕ ರಾಜೀವ್‌ ಕುಮಾರ್‌ ಸಿಂಗ್‌ ಆಸ್ಪತ್ರೆಗೆ ದೌಡಾಯಿಸಿದ್ದು, ಸಿಎಂ ಯೋಗಿ ಆದಿತ್ಯನಾಥ್‌ ಪರವಾಗಿ ಗಾಯಾಳುಗಳಿಗೆ ಉಚಿತ ಚಿಕಿತ್ಸೆ, ಮೃತಪಟ್ಟವರ ಕುಟುಂಬಗಳಿಗೆ ತಲಾ 2 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next