Advertisement

ಬೀದರನಲ್ಲಿ ಕೋವಿಡ್‌ ಲಸಿಕಾ ಪ್ರಕ್ರಿಯೆಗೆ ವೇಗ

10:32 AM Nov 02, 2021 | Team Udayavani |

ಬೀದರ: ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌. ಅವರ ನಿರ್ದೇಶನದಂತೆ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯ ಪ್ರವೃತ್ತರಾಗಿದ್ದರಿಂದ ಜಿಲ್ಲೆಯಲ್ಲಿ ಕೋವಿಡ್‌ ಲಸಿಕಾಕರಣ ಪ್ರಕ್ರಿಯೆ ವೇಗ ಪಡೆದುಕೊಂಡಿದೆ. ಹಲವಾರು ಸುತ್ತಿನ ಸಭೆ ನಡೆಸಿ ತಿಳಿಸಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಲಸಿಕಾ ಪ್ರಕ್ರಿಯೆ ಚುರುಕುಗೊಂಡಿದೆ.

Advertisement

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ| ರಿಚರ್ಡ್‌ ವಿನ್ಸೆಂಟ್‌ ಡಿಸೋಜ್‌ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದರಿಂದ, ಜಿಲ್ಲೆಯ ವಿವಿಧೆಡೆ ರಾತ್ರಿ ವೇಳೆಯಲ್ಲೂ ಲಸಿಕಾಕರಣ ನಡೆಯುತ್ತಿದೆ. ಬಗದಲ್‌ ಗ್ರಾಮದಲ್ಲಿ 17 ಜನರಿಗೆ ರಾತ್ರಿ ವೇಳೆಯಲ್ಲಿ ಲಸಿಕೆ ನೀಡಲಾಗಿದೆ.

ಮನವೊಲಿಸಿ ಲಸಿಕೆ

ತಪ್ಪು ತಿಳಿವಳಿಕೆಯ ಕಾರಣಕ್ಕೆ ಕೋವಿಡ್‌ ಲಸಿಕೆ ಪಡೆಯಲು ಹಿಂದೇಟು ಹಾಕುವವರಿಗೆ ಒತ್ತಡ ಹಾಕದೇ ಅವರ ಮನವೊಲಿಸಿ ಅಧಿಕಾರಿಗಳು ಲಸಿಕೆ ನೀಡುತ್ತಿದ್ದಾರೆ. ಜಿಪಂ ಉಪ ಕಾರ್ಯದರ್ಶಿ ಸೂರ್ಯಕಾಂತ ಎಸ್‌. ಮತ್ತು ಡಿಎಚ್‌ಒ ಡಾ| ವಿ.ಜಿ.ರೆಡ್ಡಿ ಅವರು ಈಚೆಗೆ ಲಸಿಕಾ ಪರಿಶೀಲನೆಗಾಗಿ ವಡಗಾಂವ್‌ಗೆ ಭೇಟಿ ನೀಡಿದಾಗ ಮನವೊಲಿಸಿ ಮೂವರಿಗೆ ಲಸಿಕೆ ಕೊಡಿಸಿದರು. ನೌಬಾದ್‌ ಪಿಎಚ್‌ಸಿ ಲಸಿಕಾ ತಂಡವು ನಗರದ ಮೋಹನ್‌ ಮಾರ್ಕೆಟ್‌ ಸೇರಿದಂತೆ ವಿವಿಧೆಡೆ ನಾನಾ ಅಂಗಡಿಗಳಿಗೆ ತೆರಳಿ ಅಂದಾಜು 119 ಜನರಿಗೆ ಕೋವಿಡ್‌ ಲಸಿಕೆ ನೀಡಿದ್ದು ವಿಶೇಷವಾಗಿತ್ತು. ಇಂದಿರಾ ಕ್ಯಾಂಟನ್‌ಗೆ ಬರುವವರಿಗೂ ಲಸಿಕೆ ನೀಡಲಾಯಿತು.

ಎನ್ಸಿಸಿ, ಎನ್ನೆಸ್ಸೆಸ್‌ ತಂಡ ಗ್ರಾಮಗಳಿಗೆ

Advertisement

ಆಯಾ ಗ್ರಾಮಗಳಲ್ಲಿನ ಲಸಿಕಾಕರಣ ಉಸ್ತುವಾರಿಯನ್ನು ಗ್ರಾಮ ಪಡೆಗಳಿಗೆ ವಹಿಸಲಾಗಿದೆ. ಲಸಿಕಾ ಪ್ರಗತಿ ಕಡಿಮೆ ಇರುವ ಕಡೆಗೆ ಹೆಚ್ಚಿನ ಗಮನ ನೀಡಲಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಕಾಲೇಜಿನ ಎನ್ನೆಸ್ಸೆಸ್‌, ಎನ್ಸಿಸಿ ಸ್ವಯಂ ಸೇವಕರು ಬೀದರ್‌ ತಾಲೂಕಿನ 5 ಗ್ರಾಮಗಳಿಗೆ ರವಿವಾರ ಲಸಿಕಾಕರಣದ ಜನಜಾಗೃತಿಗೆ ತೆರಳಿದರು.

ಸಾರ್ವಜನಿಕರಲ್ಲಿ ಜಿಲ್ಲಾಧಿಕಾರಿಗಳ ಮನವಿ

ಜಿಲ್ಲೆಗೆ ನಿಗದಿಪಡಿಸಿದ ಕೋವಿಡ್‌-19 ಲಸಿಕಾಕರಣ ಗುರಿ ತಲುಪಲು ಲಸಿಕಾಕರಣದ ಪ್ರಕ್ರಿಯೆಯನ್ನು ಈಗ ಮತ್ತಷ್ಟು ವೇಗಗೊಳಿಸಲಾಗಿದೆ. ಜಿಲ್ಲಾಡಳಿತದ ಸೂಚನೆಯಂತೆ ಜಿಲ್ಲೆಯ ಎಲ್ಲಾ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಯು ಲಸಿಕಾ ನೀಡಿಕೆ ಕಾರ್ಯದಲ್ಲಿ ಸಕ್ರಿಯ ಭಾಗಿಯಾಗಿದ್ದಾರೆ. ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಜನರಲ್ಲಿ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next