Advertisement

ಡಿಸಿಎಂ ಕಾರಜೋಳ ಕುಟುಂಬದ ಸಂಕಷ್ಟ ಪರಿಹಾರಕ್ಕಾಗಿ ವಿಶೇಷ ಪೂಜೆ

02:09 PM Oct 26, 2020 | keerthan |

ಬೆಂಗಳೂರು: ಕೋವಿಡ್ ಸಂಕಷ್ಟದಲ್ಲಿರುವ ಡಿಸಿಎಂ ಗೋವಿಂದ ಕಾರಜೋಳ ಕುಟುಂಬದ ಒಳಿತಿಗಾಗಿ ಕುಟುಂಬದ ಹಿತೈಷಿಗಳು ಹಾಗೂ ಅಭಿಮಾನಿಗಳಿಂದ  ಇಲ್ಲಿನ ಓಂಕಾರೇಶ್ವರ ದೇವಾಲಯದಲ್ಲಿ ಪೂಜಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

Advertisement

ದೇವಸ್ಥಾನದಲ್ಲಿ ನವಗ್ರಹ ಪೂಜಾ, ಮೃತ್ಯುಂಜಯ ಜಪ ಹಾಗೂ ಓಂಕಾರೇಶ್ವರ ಪೂಜೆ ನೆರವೇರಿಸಲಾಯಿತು.

ಪೂಜಾ ಕಾರ್ಯಕ್ರಮವನ್ನು ಕರಬಂಟನಾಳ ಶ್ರೀ ಶಿವಕುಮಾರ ಸ್ವಾಮಿ, ವೀರಭದ್ರಶಾಸ್ತ್ರಿ ಹಾಗೂ ಪ್ರಜ್ವಲ್ ಶಾಸ್ತ್ರಿ ನೆರವೇರಿಸಿದರು.  ಗೋವಿಂದ ಕಾರಜೋಳರ ಪುತ್ರ ಗೋಪಾಲ ಕಾರಜೋಳ ಕೋವಿಡ್ ಸಂಕಷ್ಟದಲ್ಲಿದ್ದು, ಇವರು ಶೀಘ್ರ ಗುಣಮುಖರಾಗಲೆಂದು ಶ್ರೀಗಳಾದ ಮಲ್ಲಿಕಾರ್ಜುನ ದೇವರು ವಿಶೇಷ ಪೂಜೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next