Advertisement

ಸಹಕಾರ ವ್ಯವಸ್ಥೆಯನ್ನು ಮತ್ನಷ್ಟು ಬಲಿಷ್ಠಗೊಳಿಸಿ

02:46 PM Jan 30, 2022 | Team Udayavani |

ಚಿಕ್ಕಬಳ್ಳಾಪುರ: ಸಹಕಾರ ವ್ಯವಸ್ಥೆ ಬಲಪಡಿಸುವ ಉದ್ದೇಶದಿಂದ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಪ್ಯಾಕ್ಸ್‌(ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ) ಗಳನ್ನು ಗಣಕೀಕರಣಗೊಳಿಸಿದ್ದು ಮುಂದಿನ 6 ತಿಂಗಳ ಅವಧಿಯಲ್ಲಿ ಅವಳಿ ಜಿಲ್ಲೆಗಳ ಪ್ಯಾಕ್ಸ್‌ಗಳು ದೇಶದಲ್ಲಿಯೇ ಮಾದರಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.

Advertisement

ನಗರದ ಹರ್ಷೋದಯ ಕನ್ವೆಂಷನ್‌ನಲ್ಲಿ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಒಕ್ಕೂಟ,ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌ ಮತ್ತುಸಹಕಾರ ಇಲಾಖೆ ಸಂಯುಕ್ತಾಶ್ರಯ ದಲ್ಲಿ ಜಿಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು,ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಮತ್ತು ವಿಸಾಫ್ಟ್‌ ಸಿಬ್ಬಂದಿಗೆ ನಡೆದ ಜಿಲ್ಲಾ ಮಟ್ಟದ ವಿಶೇಷ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಸಹಕಾರ ವ್ಯವಸ್ಥೆಯಲ್ಲಿ ಆತ್ಮಶುದ್ಧಿಯಿಂದ ಕೆಲಸ ಮಾಡಿದರೆ ಬಡವರ ಸೇವೆ ಮಾಡಲು ಸಹಕಾರಿ. ಇದರಿಂದ ಸಹಕಾರ ವ್ಯವಸ್ಥೆಯನ್ನು ಮತ್ತಷ್ಟು ಬಲಿಷ್ಠಗೊಳಿಸಬಹುದೆಂದರು.

ಹೆಚ್ಚಿನ ಅನುಕೂಲ: ಅವಳಿ ಜಿಲ್ಲೆಗಳಲ್ಲಿ ಪ್ಯಾಕ್ಸ್‌ಗಳನ್ನು ಗಣಕೀಕರಣಗೊಳಿಸುವ ಜತೆಗೆ ಎಲ್ಲಾ ವ್ಯವಸ್ಥೆಗಳನ್ನು ಪಾರದರ್ಶಕವಾಗಿರಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.ವಿಶೇಷವಾಗಿ ರೈತರು ಮತ್ತು ಮಹಿಳಾ ಸ್ವಸಹಾಯ ಸಂಘಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸಲು ಪ್ರಾಮಾಣಿಕಪ್ರಯತ್ನ ಮಾಡಿದ್ದು ಪ್ಯಾಕ್ಸ್‌ಗಳ ಕಾರ್ಯದರ್ಶಿಗಳೂತಮ್ಮ ಜವಾಬ್ದಾರಿ ಅರಿತು ಬಡವರು, ಮಹಿಳೆಯರಆರ್ಥಿಕ ಪರಿಸ್ಥಿತಿ ಸುಧಾರಿಸಬೇಕೆಂದರು.

ಆದ್ಯತೆ ಮೇರೆಗೆ ನಿರ್ವಹಿಸಿ: ಗಣಕೀಕರಣದ ಆರಂಭದಲ್ಲಿ ಎದುರಾಗುವ ತಾಂತ್ರಿಕ ಸಮಸ್ಯೆಗಳನಿವಾರಣೆಗಾಗಿ ಬ್ಯಾಂಕಿನಿಂದ ದೂರು ನಿರ್ವಹಣಾಕೇಂದ್ರ, ಹೆಲ್ತ್‌ ಡೆಸ್ಕ್ ಆರಂಭಿಸಿದ್ದು, ಪ್ರಯೋಜನ ಪಡೆದುಕೊಳ್ಳಿ. ದೂರು ಬಂದ 3 ಗಂಟೆಯೊಳಗೆಸಮಸ್ಯೆಗೆ ಪರಿಹಾರ ನೀಡಲಾಗುವುದು. ಪಾರದರ್ಶಕ ವಹಿವಾಟು, ನಂಬಿಕೆ, ವಿಶ್ವಾಸವೃದ್ಧಿಗೆ ಗಣಕೀಕರಣಕಾರಣವಾಗಲಿದೆ. ಕಾರ್ಯದರ್ಶಿಗಳು ಖುಷಿಗಾಗಿ ಮಾಡುವುದಿಲ್ಲ. ಕೇವಲ ಲಾಭದ ದೃಷ್ಟಿಯಿಂದ ಕೆಲಸ ಮಾಡುತ್ತಿದ್ದಾರೆ. ನಿಮ್ಮ ನಿಲುವು ಬದಲಾಗಬೇಕು.

Advertisement

ಸಾಲ ಪಡೆಯಲು ರೈತರು ಮತ್ತು ಮಹಿಳೆಯರುಅಲೆದಾಡುವ ಕೆಲಸ ಮಾಡಬಾರದು. ಪ್ರತಿಯೊಂದುಗ್ರಾಮಗಳಿಗೆ ಭೇಟಿ ನೀಡಿ ರೈತರು, ಬಡವರು ಮತ್ತುಮಹಿಳೆಯರಿಗೆ ಸಾಲ ಸೌಲಭ್ಯ ನೀಡುವ ಕೆಲಸವನ್ನು ಆದ್ಯತೆ ಮೇರೆಗೆ ಮಾಡಬೇಕೆಂದು ಸೂಚಿಸಿದರು.

ಇತಿಹಾಸ ಬರೆದಿದೆ: ದೇಶದಲ್ಲಿ ಎಲ್ಲಾ ಪ್ಯಾಕ್ಸ್‌ಗಳು ಗಣಕೀಕರಣವಾಗಬೇಕೆಂಬುದು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಆಶಯ. ಅವರ ಆಶಯಕ್ಕೂ ಮುನ್ನವೇ ಡಿಸಿಸಿ ಬ್ಯಾಂಕ್‌ ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳ 194 ಪ್ಯಾಕ್ಸ್‌ಗಳ ಗಣಕೀಕರಣನಡೆಸುವ ಮೂಲಕ ಹೊಸ ಇತಿಹಾಸ ಬರೆದಿದೆ ಎಂದು ಹೇಳಿದರು.

ಅವಳಿ ಜಿಲ್ಲೆಯಲ್ಲಿ ಉತ್ತಮವಾಗಿ ಮಳೆಯಾಗಿದ್ದು ಸಣ್ಣ ರೈತರಿಗೆ ಬೆಳೆ ಸಾಲ ನೀಡುವ ವ್ಯವಸ್ಥೆ ಮಾಡಬೇಕು, ಸಹಕಾರ ವ್ಯವಸ್ಥೆ ಕಟ್ಟಕಡೆ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಆಗಬೇಕು, ಧ್ವನಿ ಇಲ್ಲದವರಿಗೆ ಧ್ವನಿಯಾಗಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್‌.ವಿ. ನಾಗರಾಜ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ಸಹಕಾರ ಭವನಕ್ಕೆ ಸಹಕಾರ ಸಂಘಗಳಿಂದ ಮತ್ತು ಡಿಸಿಸಿ ಬ್ಯಾಂಕಿನ ದೇಣಿಗೆನೀಡಬೇಕೆಂದು ಮನವಿ ಮಾಡಿದರು. ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಡಾಲ್ಫಿನ್‌ ನಾಗರಾಜ್‌, ನಿರ್ದೇಶಕರಾದಮರಳೂರು ಹನುಮಂತರೆಡ್ಡಿ, ಎಚ್‌.ಎಸ್‌.ಮೋಹನ್‌ ರೆಡ್ಡಿ, ನಾಗನಾಳ ಸೋಮಣ್ಣ, ಸಿ.ಕೆ.ವೇದ, ಎನ್‌.ನಾಗಿರೆಡ್ಡಿ ಮಾತನಾಡಿದರು.

ಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್‌.ಶಿವಕುಮಾರ್‌, ಜಿಲ್ಲಾ ಸಹಕಾರ ಯೂನಿಯನ್‌ ನಿರ್ದೇಶಕ ಎನ್‌.ಕೆ.ಲಕ್ಷ್ಮೀಪತಿ, ಕೆಂಪಣ್ಣ, ಸಹಕಾರ ಸಂಘಗಳ ಸಹಾಯಕ ನಿಬಂಧಕಎಂ.ವಿ.ವೆಂಕಟೇಶ್‌ಮೂರ್ತಿ, ಜಿಲ್ಲಾ ಸಹಕಾರಿ ಯೂನಿ ಯನ್‌ ಸಿಇಒ ನಾಗಭೂಷಣ್‌, ಶಿಡ್ಲಘಟ್ಟ ಎಸ್‌ಎಫ್‌ಸಿಎಸ್‌ ಅಧ್ಯಕ್ಷ ಶೆಟ್ಟಹಳ್ಳಿ ರಾಮಚಂದ್ರಪ್ಪ, ಜಿಲ್ಲೆಯಲ್ಲಿವಿವಿಧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಅಧ್ಯಕ್ಷರು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ವಿಸಾಫ್ಟ್‌ ಸಿಬ್ಬಂದಿ ಇದ್ದರು.

ಪ್ರತ್ಯೇಕ ಡಿಸಿಸಿ ಬ್ಯಾಂಕ್‌ ಸ್ಥಾಪನೆಗೆ ನನ್ನ ಅಭ್ಯಂತರವಿಲ್ಲ  :

ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್‌ ಸ್ಥಾಪಿಸಲು ತಮ್ಮ ಅಭ್ಯಂತರವಿಲ್ಲ. ನನ್ನ ದೃಷ್ಟಿಯಲ್ಲಿ ಎರಡು ಜಿಲ್ಲೆಗಳು ಒಂದೇ ಆಗಿದ್ದು ಸಹಕಾರ ವ್ಯವಸ್ಥೆಗೆ ಧಕ್ಕೆಯಾಗದಂತೆ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತೇಕ ಬ್ಯಾಂಕ್‌ ಸ್ಥಾಪನೆ ಮಾಡಲಿ. ಅದನ್ನು ಮೊಟ್ಟ ಮೊದಲಿಗೆ ಸ್ವಾಗತಿಸುತ್ತೇನೆ. ಅವಳಿ ಜಿಲ್ಲೆಯ ರೈತರು, ಮಹಿಳೆಯರು ಮತ್ತು ಬಡಜನರ ಆರ್ಥಿಕ ಕಲ್ಯಾಣವೇ ನನ್ನ ಮುಖ್ಯಗುರಿ ಎಂದು ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next