Advertisement

ಇಂದಿನಿಂದ ವಿಶೇಷ ರೈಲು ಸಂಚಾರ: ಅಂಗಡಿ

04:59 AM May 12, 2020 | Team Udayavani |

ಬೆಳಗಾವಿ: ದೇಶದಲ್ಲಿ ನಾಳೆ ಮೇ 12 ರಿಂದ ವಿಶೇಷ ರೈಲು ಸಂಚಾರ ಆರಂಭವಾಗಲಿದ್ದು ದೇಶದ ವಿವಿಧ ಕಡೆಗಳಿಗೆ 15 ರೈಲುಗಳು ಸಂಚಾರ ಆರಂಭಿಸಲಿವೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.

Advertisement

ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಲಾಕ್‌ ಡೌನ್‌ ಬಳಿಕ ವಲಸೆ ಹೋಗಿರುವ ಜನರ ಹಿತದೃಷ್ಟಿಯಿಂದ ರೈಲ್ವೆ ಸೇವೆ ಆರಂಭಿಸಲಾಗುತ್ತಿದೆ. ಆನ್‌ ಲೈನ್‌ ಮೂಲಕವೇ ಐಆರ್‌ಸಿಟಿಸಿಯಲ್ಲಿ ಬುಕಿಂಗ್‌ ಮಾಡಬೇಕು ಎಂದರು. ಕೋವಿಡ್ ನಿಯಂತ್ರಣ ಹಾಗೂ ಸುರಕ್ಷತಾ ಕ್ರಮ ಅನುಸರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ರಾಜಧಾನಿ ದೆಹಲಿಯಿಂದ 15 ರಾಜ್ಯಗಳಿಗೆ ರೈಲು ಸಂಚಾರ ನಡೆಸಲಿವೆ. ಪ್ರಯಾಣ ಬೆಳೆಸಿದವರು ತಪಾಸಣೆಗೆ ಒಳಗಾಗಬೇಕು. ಈ ರೈಲುಗಳಲ್ಲಿ ಸಾಮಾನ್ಯ ಬೋಗಿ ಇರುವುದಿಲ್ಲ ಎಂದರು.

ಸ್ಥಳೀಯ ರೈಲು ಸಂಚಾರವನ್ನು ಆಯಾ ರಾಜ್ಯ ಸರಕಾರಗಳು ನಿರ್ಧಾರ ಮಾಡುತ್ತವೆ. ಇದಲ್ಲದೆ ಮೃಟ್ರೋ ರೈಲು ಸಂಚಾರ ಸಹ ಆಯಾ ರಾಜ್ಯ ಸರಕಾರಗಳ ವ್ಯಾಪ್ತಿಗೆ ಬರುತ್ತಿದ್ದು ಅಲ್ಲಿನ ಪರಿಸ್ಥಿತಿ ನೋಡಿಕೊಂಡು ಸರಕಾರಗಳು ಮೆಟ್ರೋ ರೈಲು ಸಂಚಾರ ಆರಂಭ ಮಾಡುತ್ತವೆ ಎಂದರು. ಲಾಕ್‌ಡೌನ್‌ ಸಡಿಲಿಕೆಯಿಂದ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚಾಗಿವೆ. ಹಸಿರು ವಲಯಗಳಲ್ಲೂ ಸೋಂಕಿನ ಪ್ರಕರಣಗಳು ದೃಢಪಟ್ಟಿವೆ. ಇನ್ನೊಂದು ಕಡೆ ಈಗ ಕಿತ್ತಳೆ ವಲಯದಲ್ಲಿರುವ ಬೆಳಗಾವಿ ಮತ್ತೆ ಕೆಂಪು ವಲಯಕ್ಕೆ ಬದಲಾಗುವದ ಅತಂಕವಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next