Advertisement

ವಿಶೇಷ ಅಧ್ಯಯನ ತರಗತಿಗೆ ಚಾಲನೆ

05:29 PM Jan 13, 2020 | Suhan S |

ಮದ್ದೂರು: ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳಿಸಬೇಕೆಂಬ ಸದುದ್ದೇಶದಿಂದ ಇಂತಹ ಅಧ್ಯಯನ ತರಗತಿಗಳನ್ನು ಆಯೋಜಿಸುತ್ತಿರುವುದಾಗಿ ಮಾನಸ ಎಜುಕೇಷನ್‌ ಟ್ರಸ್ಟ್‌ ಅಧ್ಯಕ್ಷ ವಿ.ಕೆ.ಜಗದೀಶ್‌ ತಿಳಿಸಿದರು. ತಾಲೂಕಿನ ಬೆಸಗರಹಳ್ಳಿ ಗ್ರಾಮದ ಮಾನಸ ಎಜುಕೇಷನ್‌ ಟ್ರಸ್ಟ್‌ ಆಯೋಜಿಸಿರುವ ರಾತ್ರಿ ವೇಳೆ ವಿಶೇಷ ಅಧ್ಯಯನ ತರಗತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ವರು ಮಾತನಾಡಿದರು.

Advertisement

ವಿದ್ಯಾರ್ಥಿಗಳ ಬೌದ್ಧಿಕ ಹಾಗೂ ಗುಣಾತ್ಮಕ ಫ‌ಲಿತಾಂಶಕ್ಕಾಗಿ ವಿಶೇಷ ಅಧ್ಯಯನ ತರಗತಿಗಳನ್ನು ಆರಂಭಿಸಲಾಗಿದೆ. ಇದರ ಸದುಪಯೋಗಕ್ಕೆ ಮುಂದಾಗುವ ಮೂಲಕ ಉತ್ತಮ ಫ‌ಲಿತಾಂಶ ಪಡೆಯಬೇಕು. ಪರೀಕ್ಷೆ ಭಯದಿಂದ ಹೊರಬಂದು ಈಗಿನಿಂದಲೇ ಶ್ರದ್ಧಾಸಕ್ತಿಯಿಂದ ಓದಬೇಕು ಎಂದರು.

ಗ್ರಾಮೀಣ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಇಂತಹ ಶಿಬಿರಗಳನ್ನು ಆಯೋಜಿಸಿದ್ದು, ವಿದ್ಯಾರ್ಥಿಗಳು ಏಕಾಗ್ರತೆ, ಗುರಿ, ಸಾಧನೆ ಅಳವಡಿಸಿಕೊಂಡು ಶೈಕ್ಷಣಿಕವಾಗಿ ಮುಂದುವರಿದು ಉತ್ತಮ ಸಾಧನೆ ಮಾಡಬೇಕು. ಅನಗತ್ಯವಾಗಿ ಕಾಲಾಹರಣ ಮಾಡದೆ ಈಗಿನಿಂದಲೇ ಪರೀಕ್ಷೆಗೆ ತಯಾರಿ ನಡೆಸಬೇಕೆಂದು ಸಲಹೆ ನೀಡಿದರು.

ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ 250ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಂಜೆ 4.30ರಿಂದ ರಾತ್ರಿ 8 ಗಂಟೆವರೆಗೆ ಅಧ್ಯಯನ ತರಗತಿ ಪ್ರಾರಂಭಿಸಲಾಯಿತು. ಈ ವೇಳೆ ಪ್ರಾಂಶುಪಾಲ ಪುಟ್ಟಸ್ವಾಮಿ, ನಿವೃತ್ತ ಶಿಕ್ಷಕರಾದ ಸಿದ್ದಯ್ಯ, ನಾಗರಾಜು, ಶಿಕ್ಷಕರಾದ ಪ್ರವೀಣ್‌, ನಿಶ್ಚಲ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next