Advertisement

ಇಂಡೋ-ಪಾಕ್‌ ಹೈವೋಲ್ಟೇಜ್‌ ಕದನ:ದೇಶಾದ್ಯಂತ ವಿಶೇಷ ಪೂಜೆ

09:18 AM Jun 18, 2019 | Team Udayavani |

ಹೊಸದಿಲ್ಲಿ: ಐಸಿಸಿ ವಿಶ್ವಕಪ್‌ನ ರೋಚಕ ಹಣಾಹಣಿ ಭಾನುವಾರ ನಡೆಯುತ್ತಿದ್ದು ಬದ್ಧವೈರಿಗಳಾದ ಭಾರತ ಮತ್ತು ಪಾಕಿಸ್ಥಾನ ನಡುವೆ ಮ್ಯಾಂಚೆಸ್ಟರ್‌ನಲ್ಲಿ ಹಣಾಹಣಿ ನಡೆಯಲಿದ್ದು ಭಾರತದೆಲ್ಲೆಡೆ ಕ್ರೀಡಾಭಿಮಾನಿಗಳಿಂದ ವಿಶೇಷ ಪೂಜೆ ಪುನಸ್ಕಾರಗಳನ್ನು ನಡೆಸಲಾಗುತ್ತಿದೆ.

Advertisement

ಕ್ರೀಡಾಭಿಮಾನಿಗಳು ಭಾನುವಾರ ಬೆಳ್ಳಂಬೆಳಗ್ಗೆ ದೇವಾಲಯಗಳಿಗೆ ತೆರಳಿ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಬೇಕು ಎಂದು ಸಂಕಲ್ಪಿಸಿ ಪೂಜೆಗಳನ್ನುಸಲ್ಲಿಸಿದ್ದಾರೆ.

ಕೆಲವೆಡೆ ಹೋಮ ಹವನಗಳನ್ನು ನಡೆಸಲಾಗುತ್ತಿದೆ. ವಾರಾಣಸಿ ಯಲ್ಲಿ ಗಂಗಾನದಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಗಾಂಗಾ ಆರತಿ ಬೆಳಗಲಾಗಿದೆ.

ಬೆಂಗಳೂರು, ಮಂಗಳೂರು ಸೇರಿದಂತೆ ವಿವಿಧೆಡೆ ಪೂಜೆ ಮತ್ತು ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತಿದೆ. ಪಂದ್ಯಕ್ಕೆ ಮಳೆ ಅಡ್ಡಿಯಾಗದಿರಲಿ ಎಂದೂ ಪ್ರಾರ್ಥಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next